ಕರ್ನಾಟಕ ಟಿವಿ ಚಾನೆಲ್ ನಿಂದ ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕರಾದ ಶ್ರೀ ಹರೀಶ್ ಪೂಂಜಾ’ರವರಿಗೆ ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳ ವತಿಯಿಂದ ಗೌರವಾರ್ಪಣೆ – ಕಹಳೆ ನ್ಯೂಸ್

ಬೆಳ್ತಂಗಡಿ : ಶಾಸಕರಾದ ಶ್ರೀ ಹರೀಶ್ ಪೂಂಜಾ’ರವರ ಮಿಥಿಲಾ ನಿವಾಸಕ್ಕೆ ಆಗಮಿಸಿದ ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳ ವತಿಯಿಂದ ಉಜಿರೆ ಜನಾರ್ಧನ ದೇವಸ್ಥಾನ ಅನುವoಶೀಯ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರವರಿಂದ ಇತ್ತೀಚೆಗೆ ಕರ್ನಾಟಕ ಟಿವಿ ಚಾನೆಲ್ ವತಿಯಿಂದ ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕರಾದ ಶ್ರೀ ಹರೀಶ್ ಪೂಂಜರವರು ಗೌರವಯುತವಾಗಿ ಗೌರವಾರ್ಪಣೆಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಡಾ.ಪ್ರದೀಪ್ ನಾವೂರು, ಬಿ.ಕೆ ಧನಂಜಯ ರಾವ್, ಗಿರೀಶ್ ಡೋಂಗ್ರೆ, ಕೇಶವ ಭಟ್ ಅತ್ತಾಜೆ, ಅನಂತ್ ಭಟ್ ಮಚ್ಚಿಮಲೆ, ಯೋಗೀಶ್ ಭಿಡೆ, ಅರುಣ್ ಕುಮಾರ್,ಹಾಗೂ ಗಣ್ಯರು, ಇನ್ನೂ ಪ್ರಮುಖರು, ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳು ಉಪಸ್ಥಿತರಿದ್ದರು.











