ನಮ್ಮ ಬದುಕಿನಲ್ಲಿ ದೇಶದ ಪಾತ್ರ ಮರೆಯದಿರಿ: ಪೇಜಾವರ ಶ್ರೀ – ಕಹಳೆ ನ್ಯೂಸ್
ನವದೆಹಲಿ: ನಮ್ಮ ಬದುಕು ರೂಪುಗೊಳ್ಳುವಲ್ಲಿ ದೇಶ ಮತ್ತು ಸಮಾಜದ ಪಾತ್ರ ಮಹತ್ವದ್ದಾಗಿದ್ದು, ಯುವಜನತೆ ಇದನ್ನು ಎಂದಿಗೂ ಮರೆಯಬಾರದು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ನವದೆಹಲಿಯ ದೀನದಯಾಳು ಉಪಾಧ್ಯಾಯ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪನಿಷತ್ತುಗಳು ‘ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿದೇವೋ ಭವ’ ಎಂದು ಸಾರಿವೆ. ತಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥರು ಇದಕ್ಕೆ ‘ರಾಷ್ಟ್ರದೇವೋ ಭವ’ ಎಂಬ ಸಂದೇಶವನ್ನೂ ಸೇರಿಸಿದ್ದರು...







