ಅಮೇರಿಕಾದಲ್ಲಿ ಪುತ್ತಿಗೆ ಶ್ರೀಪಾದರು ಸ್ಥಾಪಿಸಿದ್ದ ಶ್ರೀಪುತ್ತಿಗೆ ಮಠದ ಶ್ರೀ ವೆಂಕಟ ಕೃಷ್ಣ ಕ್ಷೇತ್ರದಲ್ಲಿ ಅನಿವಾಸಿ ಭಾರತೀಯರಿಂದ ಸಂಭ್ರಮದ ಯುಗಾದಿ ಆಚರಣೆ – ಕಹಳೆ ನ್ಯೂಸ್
ಪರಮಪೂಜ್ಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಶ್ವಾದ್ಯಂತ ಶ್ರೀ ಕೃಷ್ಣ ಭಕ್ತಿ ಪ್ರಸಾರಕ್ಕಾಗಿ ಸ್ಥಾಪಿಸಿರುವ ಹದಿನೈದು ಶ್ರೀ ಪುತ್ತಿಗೆ ಮಠಗಳಲ್ಲಿಯೂ ಚಾಂದ್ರ ಯುಗಾದಿ ಹಬ್ಬದ ಆಚರಣೆಯು ಸಾಂಗವಾಗಿ ವೈಭವದಿಂದ ನೆರವೇರಿತು . ಅನಿವಾಸಿ ಭಾರತೀಯ ಭಕ್ತರು ಬೆಳಿಗ್ಗಿನಿಂದ ನಡೆದ ಹೋಮ , ಪೂಜಾದಿ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಪೂಜಾ ನಂತರದಲ್ಲಿ ಪಂಚಾಗ ಶ್ರವಣ ವ್ವವಸ್ಥೆ ಮಾಡಲಾಗಿದ್ದು 12 ರಾಶಿ ಸಂಜಾತರ ವರ್ಷ ಭವಿಷ್ಯವನ್ನು ಕೇಳಲು ಜನರು ಕಿಕ್ಕಿರಿದು...