ಸಂಸ್ಕೃತ ಭಾರತೀ ಹಾಗೂ ದೇವಾಲಯ ಸಂವರ್ಧನ ಸಮಿತಿ ವತಿಯಿಂದ ಲಯನ್ಸ್ ಕ್ಲಬ್ ಸಹಕಾರದೊಂದಿಗೆ 10 ದಿನಗಳ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರ -ಕಹಳೆ ನ್ಯೂಸ್
ಪುತ್ತೂರು : ಪ್ರಾಚೀನವೂ ಪ್ರಸಿದ್ಧವು ಆದ ಸಂಸ್ಕೃತ ಭಾಷೆಯನ್ನು ಸಂಭಾಷಣೆಯ ಮೂಲಕ ಕಲಿಯುವ ಪ್ರಯತ್ನವಾಗಿ "ಸಂಸ್ಕೃತ ಭಾರತೀ" ಎಂಬ ಅಖಿಲ ಭಾರತ ವ್ಯಾಪ್ತಿಯುಳ್ಳ ಸಂಸ್ಥೆಯು ಪುತ್ತೂರಿನಲ್ಲಿ "ದೇವಾಲಯ ಸಂವರ್ಧನಾ ಸಮಿತಿ" ಒಡಗೂಡಿ ಶಿಬಿರ ವನ್ನು ಆಯೋಜಿಸಿದೆ.ಇದು ಪುತ್ತೂರಿನ ಬೊಳುವಾರಿನಲ್ಲಿರುವ ನವನೀತಂ ಸಭಾಂಗಣ ದಲ್ಲಿ ಏಪ್ರಿಲ್ 13 ರಿಂದ ಆರಂಭಗೊಂಡು ಎಪ್ರಿಲ್ 23 ಕ್ಕೆ ಕೊನೆಗೊಂಡಿದೆ. ಸಂಪೂರ್ಣ ಉಚಿತವಾದ ಈ ಶಿಬಿರದಲ್ಲಿ 10 ದಿನಗಳಲ್ಲಿ ಸಂಸ್ಕೃತದಲ್ಲೇ ಪದಗಳನ್ನು ಜೋಡಿಸುತ್ತಾ, ವಾಕ್ಯ ರಚಿಸಿ...







