ಮರಣದಂಡನೆ ಪ್ರಕರಣಗಳ ಪರಿಶೀಲನೆಗೆ ವಿಶೇಷ ಸಮಿತಿ ರಚಿಸಿದ ಹೈಕೋರ್ಟ್ : ಡಾ. ಅರುಣ್ಶ್ಯಾಮ್ ನೇಮಕ – ಕಹಳೆ ನ್ಯೂಸ್
ಪುತ್ತೂರು: ಮರಣದಂಡನೆ ವಿಧಿಸಲಾದ ಪ್ರಕರಣಗಳ ದೃಢೀಕರಣ ಮತ್ತು ಮೇಲ್ಮನವಿ ವಿಚಾರಣೆ ವೇಳೆ ಕಾನೂನು ನೆರವು ಒದಗಿಸಲು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ವಕೀಲ ಡಾ. ಅರುಣ್ಶ್ಯಾಮ್ ಪುತ್ತೂರು ನೇತೃತ್ವದಲ್ಲಿ ವಕೀಲರ ವಿಶೇಷ ಸಮಿತಿ ರಚಿಸಿದೆ. ಸುಪ್ರೀಂಕೋರ್ಟ್ ಮಾನದಂಡಗಳಂತೆ ರಚಿತವಾದ ಸಮಿತಿಯಲ್ಲಿ ಪದಾಂಕಿತ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಅವರ ಜೊತೆ ನ್ಯಾಯವಾದಿಗಳಾದ ವೆಂಕಟೇಶ್ ಪಿ. ದಳವಾಯಿ ಮತ್ತು ಡಿ. ನಾಗರಾಜ ರೆಡ್ಡಿ ಅವರು ಕಾರ್ಯ ನಿರ್ವಹಿಸಲಿದ್ದಾರೆ....







