ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ 5ನೇ ವರ್ಷದ ಕೆಸರ್ಗದ್ದೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ 5ನೇ ವರ್ಷದ ಕೆಸರ್ಗದ್ದೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ ಗೌರವಾಧ್ಯಕ್ಷರಾದ ಮಾಧವ ಪೂಜಾರಿ ಸರಳಿಕಾನ, ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ ಅಧ್ಯಕ್ಷರಾದ ಹರ್ಷಕುಮಾರ್, ಕೃಪಾನ್ ಕೋಟ್ಯಾನ್, ದಿವಾಕರ್, ಧನುಷ್, ಹರ್ಷಿತ್, ಅವಿತ್, ಶರತ್ ಕಾಡ್ಲ, ಗುರು ಸಾಜ, ಕಾರ್ತಿಕ್ ಸಾಜ, ಲಿಖಿತ್ ಸಾಜ, ಪ್ರದ್ವುಮ್, ಅಶ್ವಿನ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.









