Recent Posts

Friday, June 19, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ನಮ್ಮ ಈ ಗ್ರಾಮೀಣ ಸಂಸ್ಕೃತಿಯನ್ನು ಯುವಕರು ಬೆಳೆಸಿಕೊಂಡು ಹೋಗಬೇಕು; ಪ್ರಾಂಶುಪಾಲರಾದ ಪ್ರೋ.ನಾರಾಯಣ-ಕಹಳೆ ನ್ಯೂಸ್

ಬಾಗೇಪಲ್ಲಿ : ಜಾನಪದ ಕಲೆಗಳಲ್ಲಿ ಗ್ರಾಮೀಣ ಸೊಗಡು, ವೈವಿಧ್ಯತೆ ಇರುತ್ತದೆ. ಭಾವನೆಗಳನ್ನು ಒಳಗೊಂಡಿರುವ ನಮ್ಮ ಈ ಗ್ರಾಮೀಣ ಸಂಸ್ಕೃತಿಯನ್ನು ಯುವಕರು ಬೆಳೆಸಿಕೊಂಡು ಹೋಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ನಾರಾಯಣ ರವರು ಹೇಳಿದರು. ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಚಿಕ್ಕಬಳ್ಳಾಪುರದ ಸರ್.ಎಂ.ವಿ.ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜನೆ ಮಾಡಿದ್ದ ಜಾನಪದ ಸಾಂಸ್ಕೃತಿಕ ಸಂಭ್ರಮ-2021 ಕಾರ್ಯಕ್ರಮವನ್ನು ತಮಟೆ...
ಹೆಚ್ಚಿನ ಸುದ್ದಿ

ದೈಹಿಕ ಶಿಕ್ಷಕನೊಂದಿಗೆ ತಾಯಿ- ಮಗಳ ಅಕ್ರಮ ಸಂಬಂಧ ; ಬುದ್ದಿವಾದ ಹೇಳಿದ ತಂದೆಯ ಹತ್ಯೆ-ಕಹಳೆ ನ್ಯೂಸ್

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಳಗಟ್ಟೆಯಲ್ಲಿ ತಾಯಿ, ಮಗಳು ದೈಹಿಕ ಶಿಕ್ಷಕನೊಬ್ಬನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಇದನ್ನು ಪ್ರಶ್ನಿಸಿದ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಕುಳಗಟ್ಟೆ ಗ್ರಾಮದ 70 ವರ್ಷದ ಮಂಜಪ್ಪ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾರೆ. ಮಂಜಪ್ಪ ಅವರ ಮಗಳು ಉಷಾ ತನ್ನ ಗಂಡನನ್ನು ತೊರೆದು ಮಗಳು ಸಿಂಧು ಜೊತೆಗೆ ತಂದೆ ಮಂಜಪ್ಪನ ಮನೆಯಲ್ಲಿ ವಾಸವಾಗಿದ್ದಳು. ಈ ವೇಳೆಯಲ್ಲಿ ಉಷಾಗೆ ಎರಡು ಮಕ್ಕಳ ತಂದೆಯಾಗಿರುವ...
ಹೆಚ್ಚಿನ ಸುದ್ದಿ

ಫೇಲ್ ಮಾಡುವ ಬೆದರಿಕೆಯೊಡ್ಡಿ ಅತ್ಯಾಚಾರ ; ಪ್ರಾಧ್ಯಾಪಕನ ವಿರುದ್ದ ವಿದ್ಯಾರ್ಥಿನಿಯಿಂದ ದೂರು-ಕಹಳೆ ನ್ಯೂಸ್

ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ಪರೀಕ್ಷೆಯಲ್ಲಿ ಪಾಸ್ ಮಾಡಬೇಕಾದ್ರೆ ನನ್ನ ಆಸೆ ಈಡೇರಿಸು. ಇಲ್ಲವಾದ್ರೆ ಫೇಲ್ ಮಾಡ್ತೇನೆ ಅಂತಾ ಬೆದರಿಸಿ ಪ್ರಾಧ್ಯಾಪಕನೋರ್ವ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ರಾಣೆಬೆನ್ನೂರು ತಾಲೂಕಿನ ಹನುಮನಟ್ಟಿ ಗ್ರಾಮದಲ್ಲಿರುವ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನೂರ್ ನವಾಜ್ ವಿರುದ್ದ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.  ಯುವತಿ ಕೃಷಿ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಪ್ರಾಧ್ಯಾಪಕ ಡಾ.ನೂರ್ ನವಾಜ್ ಅವರು, ನೀನಂದ್ರೆ...
ಹೆಚ್ಚಿನ ಸುದ್ದಿ

ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲೀ ಕುಟುಂಬದಿಂದ ತುಲಾಭಾರ ಸೇವೆ –ಕಹಳೆ ನ್ಯೂಸ್

ಕೋಟ : ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯೋರ್ವರು ಮಗುವಿನೊಂದಿಗೆ ತುಲಾಭಾರ ಸೇವೆ ಸಲ್ಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂಲತಃ ಕೋಟದ ನಿವಾಸಿಯಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಮುಸ್ಲಿಂ ಕುಟುಂಬದವರು ಹರಿಕೆಯನ್ನು ಹೊತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹರಿಕೆಯನ್ನು ಸಲ್ಲಿಸಿದ್ದಾರೆ. ತುಲಾಭಾರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಧಾರ್ಮಿಕ ಸೌಹಾರ್ದತೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲಾ ಅಮೃತೇಶ್ವರಿಯ...
ಹೆಚ್ಚಿನ ಸುದ್ದಿ

ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ನಾಡ ಕೋವಿಯಿಂದ ಗುಂಡಿಕ್ಕಿ ಯುವಕ ಆತ್ಮಹತ್ಯೆ-ಕಹಳೆ ನ್ಯೂಸ್

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ಯುವಕನೋರ್ವ ನಾಡಕೋವಿಯಿಂದ ತನಗೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಯುವಕನನ್ನು 30ವರ್ಷದ ವಿಶಾಕ್ ಪೂಜಾರಿ ಎಂದು ಗುರುತಿಸಲಾಗಿದೆ. ಮೃತ ಯುವಕ ವಿವಾಹಿತನಾಗಿದ್ದು , 1ಹೆಣ್ಣು ಮಗುವನ್ನು ಹೊಂದಿದ್ದಾರೆ. ಇವರು ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಹೋದವರು ನಂತರ ಪತ್ತೆಯಾಗಲಿಲ್ಲ. ಕಂಗಾಲಾದ ಮನೆಯವರು ಹುಡುಕಾಟ ನಡೆಸಿದಾಗ ತೋಟದಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಕಾರ್ಕಳ ಪೊಲೀಸರು ಆಗಮಿಸಿ...
ಹೆಚ್ಚಿನ ಸುದ್ದಿ

ಇಬ್ಬರು ಮಹಿಳಾ ಸಿಬ್ಬಂದಿಗಳಿಂದ ಪ್ರಾಥಮಿಕ ಆಸ್ಪತ್ರೆಯಲ್ಲೇ ಸಿಗರೇಟ್, ಗುಂಡು ಪಾರ್ಟಿ-ಕಹಳೆ ನ್ಯೂಸ್

ಬೆಳಗಾವಿ : ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಗಳು ಪ್ರಾಥಮಿಕ ಆರೋಗ್ಯ ಆಸ್ಪತ್ರೆಯಲ್ಲೇ ಸಿಗರೇಟ್, ಗುಂಡು ಪಾರ್ಟಿ ನಡೆಸಿದ ಘಟನೆ ನಡೆದಿದೆ. ಡಿ ಗ್ರೂಪ್ ಸಿಬ್ಬಂದಿ ಸಾರಿಕಾ ಮತ್ತು ಗುತ್ತಿಗೆ ಆಧಾರದ ಮೇಲೆ ಸ್ಪಾಫ್ ನರ್ಸ್ ಪ್ರಾಥಮಿಕ ಆಸ್ಪತ್ರೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದು, ಆಸ್ಪತ್ರೆಯಲ್ಲೇ ಸಿಗರೇಟ್ ಸೇದಿ, ಮದ್ಯಪಾನ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಪ್ರಾಥಮಿಕ ಕೇಂದ್ರವು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ....
ಹೆಚ್ಚಿನ ಸುದ್ದಿ

ಉಜಿರೆ ಬೆನಕ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಗ್ಯಾಸ್ಟ್ರೋ ಎಂಡೋಸ್ಕೋಪಿಕ್ ಉಪಕರಣ, ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸುವುದು ಅಭಿನಂದನೀಯ-ಕಹಳೆ ನ್ಯೂಸ್

ಉಜಿರೆ : ಸಾಮಾನ್ಯವಾಗಿ ಪಟ್ಟಣಿಗರಿಗೆ ಸಿಗುª ಸೌಲಭ್ಯವನ್ನು ಉಜಿರೆಯಂತಹ ಗ್ರಾಮೀಣ ಪ್ರದೇಶದಲ್ಲಿಒದಗಿಸಿರುವುದು ಅಭಿನಂದನೀಯ ಎಂದು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ಗ್ಯಾಸ್ಟ್ರೊ ಎಂಟರಾಲಜಿಸ್ಟ್ ಡಾ.ಅನುರಾಗ್ ಶೆಟ್ಟಿ ಅಭಿಪ್ರಾಯಪಟ್ಟರು. ಡಾ.ಅನುರಾಗ್ ಶೆಟ್ಟಿ ಅವರು ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ನೂತನ ಗ್ಯಾಸ್ಟ್ರೊ ಎಂಟರಾಲಜಿ ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಟೊಳ್ಳಾದ ಅಂಗ, ದೇಹದ ಕುಹರದ ಒಳಭಾಗವನ್ನು ಹಾಗೂ ಜೀರ್ಣಾಂಗವ್ಯೂಹವನ್ನು ಪರೀಕ್ಷಿಸಲು ಎಂಡೋಸ್ಕೋಪಿಯನ್ನು ಬಳಸಲಾಗುತ್ತದೆ. ಹೊಟ್ಟೆನೋವು, ಹುಣ್ಣು, ಜಠರದುರಿತ, ಜೀರ್ಣಾಂಗವ್ಯೂಹದ ರಕ್ತಸ್ತ್ರಾವ, ದೀರ್ಘಕಾಲಿಕ ಮಲಬದ್ಧತೆ ಅಥವಾ ಅತಿಸಾರ...
ಹೆಚ್ಚಿನ ಸುದ್ದಿ

ಹರಿದ ಜೀನ್ಸ್ ಧರಿಸುವ ಯುವತಿಯವರು ಸಮಾಜದಲ್ಲಿ ಕೆಟ್ಟ ನಿದರ್ಶನಗಳನ್ನು ಹುಟ್ಟುಹಾಕುತ್ತಿದ್ದಾರೆ ; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ-ಕಹಳೆ ನ್ಯೂಸ್

ಉತ್ತರಾಖಂಡ : ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಅವರು, ಹರಿದ ಜೀನ್ಸ್ ಧರಿಸುವ ಯುವತಿಯವರು ಸಮಾಜದಲ್ಲಿ ಕೆಟ್ಟ ನಿದರ್ಶನಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಹೊಸದಾಗಿ ನೇಮಕಗೊಂಡಿರುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಭಾಷಣವೊಂದರಲ್ಲಿ ಮಾತನಾಡಿದ ಅವರು, "ಮಂಡಿಗಳನ್ನು ತೋರಿಸಿಕೊಂಡು ಹರಿದ ಜೀನ್ಸ್ ಧರಿಸುವುದು ಶ್ರೀಮಂತರ ಮಕ್ಕಳಂತೆ ಕಾಣುವುದು ಈಗಿನ ಟ್ರೆಂಡ್ ಆಗಿಬಿಟ್ಟಿದೆ. ಮನೆಯಿಂದ ಅಲ್ಲದೇ ಇವೆಲ್ಲಾ ಎಲ್ಲಿಂದ ಬರುತ್ತಿವೆ ? ಹರಿದ ಜೀನ್ಸ್‍ನಲ್ಲಿ ತನ್ನ ಮಂಡಿ ತೋರಿಸಿಕೊಳ್ಳುವ...
1 76 77 78 79 80 174
Page 78 of 174