Monday, May 4, 2026

archivekahale news

ಸುದ್ದಿ

Breaking News : ರವೀಷ ತಂತ್ರಿಯವರ ಸಹವರ್ತಿ, ಕಾಸರಗೋಡು ಹಿಂದೂ ಐಕ್ಯ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಉಡುಪ ವಿರುದ್ಧ ಮತೀಯ ಗೂಂಡಾಶೀಟ್ ತೆರೆಯಲು ಮುಂದಾದ ಎಸ್ಪಿ ರವಿಕಾಂತೇಗೌಡ ಕ್ರಮಕ್ಕೆ ವ್ಯಾಪಕ ಖಂಡನೆ – ಕಹಳೆ ನ್ಯೂಸ್

ವಿಟ್ಲ, ಸೆ 22 : ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಇತ್ತೀಚೆಗೆ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವೊಂದರಲ್ಲಿ ಇಸ್ಲಾಂ ಧರ್ಮದ ಬಗ್ಗೆ ನಿಂದನೆ ಹಾಗೂ ಕೋಮು ಪ್ರಚೋದನಾತ್ಮಕ ಭಾಷಣ ಮಾಡಿರುವ ಕಾಸರಗೋಡ್ ಹಿಂದೂ ಐಕ್ಯ ವೇದಿಕೆಯ ಮುಖಂಡನನ್ನು ವಿಟ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಾಸರಗೋಡು ಬಿಜೆಪಿ ಪ್ರಮುಖ ರವೀಷ ತಂತ್ರಿಯವರ ಸಹವರ್ತಿ, ಕಾಸರಗೋಡ್ ಹಿಂದೂ ಐಕ್ಯ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಉಡುಪ (32) ಬಂಧಿತ ಆರೋಪಿ. ಈತ ಘಟನೆಯ ಬಳಿಕ...
ಸುದ್ದಿ

Big News : ಸರ್ಕಾರ ವಶಪಡಿಸಿಕೊಂಡಿರುವ ಗೋಕರ್ಣದ ದೇವಸ್ಥಾನವನ್ನು ಪುನಃ ಶ್ರೀ ರಾಮಚಂದ್ರಪುರ ಮಠಕ್ಕೆ ನೀಡದೇ ಇದ್ದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯವ್ಯಾಪಿ ತೀವ್ರ ಆಂದೋಲನದ ಎಚ್ಚರಿಕೆ – ಕಹಳೆ ನ್ಯೂಸ್

ಗೋಕರ್ಣದ ಶ್ರೀ ಮಹಾಭಲೇಶ್ವರ ದೇವಸ್ಥಾನವನ್ನು ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮದ್ಯಂತರ ಆದೇಶದ ವಿರುದ್ಧವಾಗಿ ದೇವಸ್ಥಾನದ ಆಡಳಿತವನ್ನು ವಶಪಡಿಸಿಕೊಳ್ಳುವುದು ಕಾನೂನು ಬಾಹಿರ ಕೃತ್ಯ ಮಾತ್ರವಲ್ಲದೇ, ಅದು ಸರ್ವೋಚ್ಛ ನ್ಯಾಯಾಲಯದ ಅಪಮಾನವಾಗಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ೨೦೦೮ ರಿಂದ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ ಗೋಕರ್ಣದ ಶ್ರೀ ಮಹಾಭಲೇಶ್ವರ ದೇವಸ್ಥಾನದ ಆಡಳಿತವನ್ನು ನಡೆಸಿಕೊಂಡು ಬಂದಿದೆ ಮತ್ತು ಉತ್ತಮ...
ಸುದ್ದಿ

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಚಾರ್ಮಾಡಿ ಘಾಟ್ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕಿಸುವ ಚಾರ್ಮಾಡಿ ಘಾಟಿ ಸಂಪೂರ್ಣ ಕಿತ್ತುಹೋಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಂಚಾರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಿರಾಡಿ ಘಾಟಿ, ಸಂಪಾಜೆ ಘಾಟಿ ಹೆದ್ದಾರಿ ಬಂದ್ ಆದ ಸಂದರ್ಭದಲ್ಲಿ ಚಾರ್ಮಾಡಿ ಘಾಟಿ ಮಾತ್ರ ಸಂಪರ್ಕ ರಸ್ತೆಯಾಗಿ ಉಳಿದಿತ್ತು. ಇದರಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿದ ಕಾರಣ ಘಾಟಿ ರಸ್ತೆ ಸಂಪೂರ್ಣ ಹಾಳಾಗಿದೆ. ಅಪಾಯಕಾರಿ ತಿರುವುಗಳಲ್ಲಿ ರಸ್ತೆ ಡಾಂಬರು ಕಿತ್ತು ಹೋಗಿ ಗುಂಡಿಗಳು ಬಿದ್ದಿದೆ....
ಸುದ್ದಿ

ಭಗವದ್ಗೀತೆಯನ್ನು ಸುಟ್ಟು ದಲಿತ ಸಂಘಟನೆಗಳಿಂದ ವಿಕೃತ ಪ್ರತಿಭಟನೆ ; ವ್ಯಾಪಕ ಖಂಡನೆ – ಕಹಳೆ ನ್ಯೂಸ್

ಹುಬ್ಬಳ್ಳಿ: ಇತ್ತೀಚೆಗೆ ದೆಹಲಿಯಲ್ಲಿ ಸಂವಿಧಾನ ಪ್ರತಿಗಳನ್ನು ಸುಟ್ಟು ಹಾಕಿದ್ದಕ್ಕೆ ಪ್ರತಿಕಾರವಾಗಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡು ಬೀದಿಯಲ್ಲಿ ಭಗವದ್ಗೀತೆ ಪ್ರತಿಗಳನ್ನು ಸುಡುವ ಮೂಲಕ ದಲಿತ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಪ್ರತಿಭಟನೆಯಲ್ಲಿ ಹುಬ್ಬಳ್ಳಿ-ಧಾರವಾಡ ಸಂವಿಧಾನ ಉಳಿಸಿ ಹೋರಾಟ ವೇದಿಕೆ ಹಾಗೂ ವಿವಿಧ ದಲಿತ ಸಂಘಟನೆಗಳು ಭಾಗವಹಿಸಿದ್ದವು. ಚೆನ್ನಮ್ಮ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರು, ಭಗವದ್ಗೀತೆ ಪ್ರತಿಗಳಿಗೆ ಬೆಂಕಿ ಹಚ್ಚಿದರು. ನೆಹರೂ ಮೈದಾನದ ಬಳಿಯ ಅಂಬೇಡ್ಕರ್ ಭವನದಿಂದ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ,...
ಸುದ್ದಿ

ರಾಷ್ಟ್ರಸಂತನ ಯಶೋಮಾರ್ಗ ; ಜನ್ಮದಿನದ ವಿಶೇಷ ” ಮೋದಿ @ 69 ” – ಕಹಳೆ ನ್ಯೂಸ್

ನರೇಂದ್ರ ಮೋದಿ ಎಂದರೆ ಭಾರತ ಎನ್ನುವ ಮಟ್ಟಿಗೆ ವಿಶ್ವಭೂಪಟದಲ್ಲಿ ಹಿಂದುಸ್ಥಾನಕ್ಕೆ ವಿಶೇಷ ಗುರುತು ನೀಡಿದ ಸಾಧನೆಗೈದಿರುವ ಭಾರತದ ಪ್ರಧಾನಿ ಸೋಮವಾರ (ಸೆ.17) 69ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಗುಜರಾತಿನ ವಡ್​ನಗರ್​ನಿಂದ ದೆಹಲಿಯ ಒಡ್ಡೋಲಗದವರೆಗೆ ಅವರು ಸಾಗಿ ಬಂದಿರುವ ಹಾದಿ ಹಲವರಿಗೆ ಅನುಕರಣೀಯವಾದರೆ ಇನ್ನೂ ಕೆಲವರಿಗೆ ಅಚ್ಚರಿಯ ಪಥ. ಸಂಘದಿಂದ ಬೆಸೆದುಕೊಂಡ ರಾಜಕೀಯ ಹಾದಿಯಲ್ಲಿ ಬಿಜೆಪಿಯ ಸಂಘಟನೆ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿ, ಪಕ್ಷವನ್ನು ಸಂಸತ್​ನ ಗದ್ದುಗೆಗೇರಿಸುವಲ್ಲಿ ಯಶಸ್ವಿಯಾಗಿರುವ ಮೋದಿ ಮತ್ತೊಂದು ಅವಧಿಗೂ ಮೋಡಿ...
ಸುದ್ದಿ

ಕೆಥೊಲಿಕ್ ಧರ್ಮ ಪ್ರಾಂತ್ಯದ 14ನೇ ಧರ್ಮಾಧ್ಯಕ್ಷ (ಬಿಷಪ್)ರಾಗಿ ಡಾ.ಪೀಟರ್ ಪಾವ್ಲ್ ಸಲ್ದಾನಾ ; ಭವ್ಯ ಸಮಾರಂಭದಲ್ಲಿ ದೀಕ್ಷೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಕೆಥೊಲಿಕ್ ಧರ್ಮ ಪ್ರಾಂತ್ಯದ 14ನೇ ಧರ್ಮಾಧ್ಯಕ್ಷ (ಬಿಷಪ್)ರಾಗಿ ಡಾ.ಪೀಟರ್ ಪಾವ್ಲ್ ಸಲ್ದಾನಾ ನಗರದ ರೊಜಾರಿಯೊ ಕೆಥೆಡ್ರೆಲ್‌ನಲ್ಲಿ ಶನಿವಾರ ಭವ್ಯ ಸಮಾರಂಭದಲ್ಲಿ ದೀಕ್ಷೆ ಸ್ವೀಕರಿಸಿದರು. ದೇಶದ ವಿವಿಧ ಭಾಗಗಳ 26 ಬಿಷಪರು, 500ಕ್ಕೂ ಅಧಿಕ ಧರ್ಮಗುರುಗಳು, 10 ಸಾವಿರಕ್ಕೂ ಅಧಿಕ ಕ್ರೈಸ್ತರು, ಜನಪ್ರತಿನಿಧಿಗಳು, ಸಾರ್ವಜನಿಕರು ಈ ಐತಿಹಾಸಿಕ ಸಮಾರಂಭವನ್ನು ಸಾಕ್ಷೀಕರಿಸಿದರು. ಬೆಳಗ್ಗೆ ರೊಜಾರಿಯೊ ಕೆಥೆಡ್ರೆಲ್‌ನಲ್ಲಿ ನಿರ್ಗಮನ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಮುಂದಾಳತ್ವದಲ್ಲಿ ದೀಕ್ಷೆಯ ಪ್ರಧಾನ ಅಭಿಷೇಕದ ವಿಧಿವಿಧಾನ ನೆರವೇರಿತು....
ಸಿನಿಮಾಸುದ್ದಿ

ಸ್ನೇಹಿತೆ ನಿವೇದಿತಾ ಗೌಡ ಜತೆ 29ನೇ ಹುಟ್ಟುಹುಬ್ಬ ಆಚರಿಸಿಕೊಂಡ ರ‍್ಯಾಪರ್​ ಸ್ಟಾರ್​ – ಕಹಳೆ ನ್ಯೂಸ್

ಬೆಂಗಳೂರು: ಬಿಗ್​ ಬಾಸ್​ ಖ್ಯಾತಿಯ, ಸಂಗೀತ ಸಂಯೋಜಕ ಚಂದನ್​ ಶೆಟ್ಟಿಗೆ ಇಂದು 29ನೇ ಜನ್ಮದಿನದ ಸಂಭ್ರಮ. ತಡರಾತ್ರಿ ಚಂದನ್​ ತಮ್ಮ ಜನ್ಮದಿನವನ್ನು ಕುಟುಂಬದವರು, ಸ್ನೇಹಿತೆ ನಿವೇದಿತಾ ಗೌಡ ಜತೆ ಆಚರಿಸಿಕೊಂಡರು. ಬೆಂಗಳೂರಿನ ನಾಗರಬಾವಿ ಮನೆಯಲ್ಲಿ ಚಂದನ್​ ಶೆಟ್ಟಿ ಜನ್ಮದಿನ ಆಚರಣೆ ನಡೆಯಿತು. ಕೇಕ್​ನ್ನು ಸಿಎಸ್​ ಎಂದು ವಿನೂತನವಾಗಿ ಸಿದ್ಧಗೊಳಿಸಲಾಗಿತ್ತು. ಅಭಿಮಾನಿಗಳೂ ಸಹ ಪಾಲ್ಗೊಂಡು ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ಚಂದನ್​ ಶೆಟ್ಟಿ, ಮೊದಲು ಹುಟ್ಟುಹಬ್ಬ ತುಂಬ ಲಿಮಿಟ್​ ಆಗಿತ್ತು. ಬಿಗ್...
ಸುದ್ದಿ

ಸಿಹಿ ಸುದ್ದಿ ; ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರೂ. ಇಳಿಕೆ – ಕಹಳೆ ನ್ಯೂಸ್

ಕಲಬುರಗಿ: ದಿನನಿತ್ಯ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ದರ ಏರಿಕೆಯಾಗುತ್ತಿದೆ. ಸಾರ್ವಜನಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ರೇಟ್ ಮೇಲಿನ ದರ ಕಡಿತಗೊಳಿಸುತ್ತಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಕಲಬುರಗಿಯಲ್ಲಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆ ಬಳಿಕ 40 ಸಾವಿರ ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಘೋಷಿಸಿದ್ದ ಎಚ್‍ಡಿಕೆ, ಅದಕ್ಕಾಗಿ ಹಣ ಹೊಂದಿಸಲು ಸೆಸ್ ಹೆಚ್ಚಿಸಿದ್ದರು. ಬಜೆಟ್ ನಲ್ಲಿ ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು...
1 1,377 1,378 1,379 1,380 1,381 1,459
Page 1379 of 1459