ವಿವೇಕಾನಂದ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಶೈಕ್ಷಣಿಕ ಕಾರ್ಯಗಾರ, ಗುರಿ ಮತ್ತು ಧ್ಯೇಯೊದ್ದೇಶವನ್ನು ಸಾಧಿಸುವುದೇ ಜೀವನದ ಸಾರ್ಥಕತೆಯಾಗಿದೆ ; ಕಶೆಕೋಡಿ ಸೂರ್ಯನಾರಾಯಣ ಭಟ್-ಕಹಳೆ ನ್ಯೂಸ್
ಪುತ್ತೂರು : ಆಸೆ ಯಾವತ್ತಿಗೂ ಸ್ವತಂತ್ರವಾಗಿರಬೇಕೆ ಹೊರತು ಸಂಕೋಲೆಗಳಿಂದ ಬಂಧಿಯಾಗಿರಬಾರದು, ನಾವು ಆಸೆಗಳನ್ನು ಎಷ್ಟು ಬಂಧಿಸಲು ಪ್ರಯತ್ನಿಸುತ್ತೇವೆಯೋ ಅಷ್ಟು ನಮಗೆ ಅಪಾಯಕಾರಿ. ಮನುಷ್ಯನಿಗೆ ಜೀವನದಲ್ಲಿ ಆಸೆಗಳಿಲ್ಲದೆ ಬದುಕುವುದು ಕಷ್ಟ ಆದರೆ ಆಸೆ ಅತಿಯಾಗಬಾರದು ಎಂದು ರಾಜ್ಯ ಧಾರ್ಮಿಕ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು. ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಕಲಾ ವಿಭಾಗದ ಜಂಟಿ ಆಶ್ರಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ನಡೆದ ವ್ಯಕ್ತಿತ್ವ ವಿಕಸನ ಮತ್ತು ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ...







