ಉಪ್ಪಿನಂಗಡಿಯಲ್ಲಿ ಮಲ್ಲಿಗೆಗೆ ಆರ್ಡರ್ ನೀಡಿ ಅಂಗಡಿಯಾತನಿಂದಲೇ ಹಣ ಪಡೆದು ವಂಚಿಸಿದ ಖದೀಮ-ಕಹಳೆ ನ್ಯೂಸ್
ಉಪ್ಪಿನಂಗಡಿ : ಉಪ್ಪಿನಂಗಡಿಯಲ್ಲಿ ವ್ಯಕ್ತಿಯೋರ್ವ ಮಲ್ಲಿಗೆಗೆ ಆರ್ಡರ್ ನೀಡಿ ಅಂಗಡಿಯಾತನಿಂದಲೇ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. ನನ್ನ ಅಪ್ಪ ನಿವೃತ್ತ ಬ್ಯಾಂಕ್ ಆಫೀಸರ್, ಅವರು ನಿಮ್ಮಲ್ಲೇ ಖಾಯಂ ಹೂವು ಖರೀದಿ ಮಾಡುವುದು. ನಮ್ಮ ಮನೆಯಲ್ಲಿ ದೈವದ ಕೋಲ ಇದ್ದು, ಹಾಗಾಗಿ 15 ಅಟ್ಟಿ ಮಲ್ಲಿಗೆ ಬೇಕಾಗಿದೆ ಎಂದೆಲ್ಲಾ ಮಾತನಾಡಿ ವಿಶ್ವಾ ಮೂಡಿಸಿ, ಬಳಿಕ ಅಂಗಡಿಯವರ ಬಳಿಯಿಂದಲೇ ಹಣ ಪಡೆದುಕೊಂಡು ವಂಚಿಸಿದ್ದಾನೆ. ಬೈಕ್ನಲ್ಲಿ ಬಂದಿದ್ದ ವ್ಯಕ್ತಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡೇ...







