ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಬಿ ಸಿ ರೋಡು ಶಾಖೆ ಬಂಟ್ವಾಳ ವತಿಯಿಂದ ನಶೆ ಮುಕ್ತ ಪ್ರತಿಜ್ಞೆಗಳ ಮಹಾ ಅಭಿಯಾನ -ಕಹಳೆ ನ್ಯೂಸ್

ಬಂಟ್ವಾಳ: ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಬಿ ಸಿ ರೋಡು ಶಾಖೆ ಬಂಟ್ವಾಳ ವತಿಯಿಂದ ನಶೆ ಮುಕ್ತ ಪ್ರತಿಜ್ಞೆಗಳ ಮಹಾ ಅಭಿಯಾನ ಕಾರ್ಯಕ್ರಮವು ಬಿಸಿ ರೋಡ್ ಶಾಖೆಯಲ್ಲಿ ಅಗಸ್ಟ್ 19 ಬುಧವಾರ ಜರಗಿತು. ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ನಶೆ ಮುಕ್ತ ಭಾರತವನ್ನಾಗಿಸುವ ಪ್ರತಿಜ್ಞ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ, ಮಿಟಿಲೇಶ್ವರ ದೇವಸ್ಥಾನದ ನೆಟ್ಲ ಮುಖ್ಯಸ್ಥ ನವೀನ್ ಗಟ್ಟಿ ನರಿಕೊಂಬು ಭಯಂಕೇಶ್ವರ ದೇವಸ್ಥಾನದ ಟ್ರಸ್ಟಿಗಳಾದ ಪ್ರೇಮನಾಥ್ ಶೆಟ್ಟಿ ಅಂತರ, ನವೀನ್ ಮಾಣಿಮಜಲು, ಉಮೇಶ್ ನೆಲ್ಲಿಗುಡ್ಡೆ, ಉದ್ಯಮಿ ಐತಪ್ಪ ಆಳ್ವ ಬಿಸಿ ರೋಡ್, ನೃತ್ಯ ಶಿಕ್ಷಕಿ ರೋಹಿಣಿ,ಮಲ್ಲಿಕಾ,ದೀಪಿಕಾ ಶಾಲಾ ಮುಖ್ಯ ಶಿಕ್ಷಕ ಸಾಧು, ಬ್ರಹ್ಮಕುಮಾರಿ ಬಿಸಿ ರೋಡ್ ಸೇವಾ ಕೇಂದ್ರದ ಸಂಚಾಲಕಿ ಸಾವಿತ್ರಿ, ಸಂಯೋಜಕರಾದ ಬ್ರಹ್ಮಕುಮಾರ ಗಣಪತಿ, ಮೊದಲಾದವರು ಉಪಸ್ಥಿತರಿದ್ದರು











