Saturday, May 2, 2026

archivekahale news

ಸುದ್ದಿ

ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ…! – ಕಹಳೆ ನ್ಯೂಸ್

ಮಂಗಳೂರು, ಆ 25 : ಈಗಾಗಲೇ ಕೊಡಗು ಜಿಲ್ಲೆಯನ್ನು ಅಕ್ಷರಶಃ ನಲುಗಿಸಿರುವ ಮಳೆರಾಯನ ಆರ್ಭಟ ಮತ್ತೆ ಶುರವಾಗಲಿದೆ. ಕೊಡಗು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಆಗಸ್ಟ್ ೨೫ರಿಂದ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಧಾರಕಾರ ಮಳೆ ಸುರಿಯಲಿದೆ. ಜಿಲ್ಲೆಯ ಜನತೆ ಮತ್ತೆ ಎಚ್ಚರಿಕೆಯಿಂದ ಇರಬೇಕಾಗಿದೆ.   ಬಂಗಾಳಕೊಲ್ಲಿಯ ಒರಿಸ್ಸಾ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಿಂದಾಗಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಲಿದೆ....
ಸುದ್ದಿ

ಕೊಡಗಿನ ಸಂತ್ರಸ್ತ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಕ್ಕಂದೂರು ಪ್ರಕಾಶ್ ಗೆ ಸಹಾಯ ಹಸ್ತ ಚಾಚಿದ ಡಾ. ಉದಯ ಕುಮಾರ್ ಮತ್ತು ಸೇವಾ ಭಾರತಿ ; ಇದು ಕಹಳೆ ನ್ಯೂಸ್ ಇಂಪ್ಯಾಟ್ ! – ಕಹಳೆ ನ್ಯೂಸ್

ಕೊಡಗು : ಮಳೆಯ ಅವಾಂತರದಿಂದ ತತ್ತರಿಸಿದ ಕೊಡಗಿನ ಒಬ್ಬೊಬ್ಬರ ಪರಿಸ್ಥಿತಿಯೂ ಶೋಕಸಾಗರದಲ್ಲಿ ಮುಳುಗಿದೆ‌. ಉಳಿಯಲು ಸೂರಿಲ್ಲ, ಒಪ್ಪತ್ತಿಗೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ಮಕ್ಕಂದೂರು ನಿವಾಸಿ ಪ್ರಕಾಶ್ ಎಂಬುವವರಿಗೆ ಮೊದಲೇ ಕಡು ಬಡತನ, ಜೊತೆಗೆ ತಮ್ಮ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದರು ಜೊತೆಗೆ ಕೊಡಗಿನ ಪ್ರವಾಹಕ್ಕೆ ಸಿಲುಕಿ ಈತ ನನ್ನದಾಗಿ ಇದ್ದ ಏಕೈಕ ಮನೆಯನ್ನೂ ಕಳೆದುಕೊಂಡು, ಅನಾಥನಾಗಿದ್ದ. ಈ ಬಡಪಾಯಿ ಪ್ರಕಾಶನಿಗೀಗ ಒಪತ್ತಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಈ...
ಸುದ್ದಿ

ಕೊಡವರ ಜೊತೆ ನಾವಿದ್ದೇವೆ ; ಅವರಿಗೆ ಹೊಸ ಬದುಕಟ್ಟಿಕೊಡುವ ಬರವಸೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ – ಕಹಳೆ ನ್ಯೂಸ್

ಮಡಿಕೇರಿ, ಆ 24 : ರಣ ಮಳೆ ಮತ್ತು ಭೀಕರ ಪ್ರವಾಹಕ್ಕೆ ತತ್ತರಿಸಿರುವ ಕೊಡಗು ಜಿಲ್ಲೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇಅಲ್ಲಿನನೆರೆಸಂತ್ರಸ್ತರೊಂದಿಗೆಮಾತಕತೆನಡೆಸಿಮಾಹಿತಿಪಡೆಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಿಮ್ಮ ಜೊತೆ ನಾವಿದ್ದೇವೆ. ಬದುಕು ಕಟ್ಟಿಕೊಡಲು ನಾವು ಬದ್ಧ. ಕೊಡಗಿನ ರಸ್ತೆಗಳು, ಮನೆಗಳು, ಕಟ್ಟಡಗಳು, ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ಪುನಃಸ್ಥಾಪಿಸುವ ಸಲುವಾಗಿ ನಾನು ಇಲ್ಲಿಗೆ ಬಂದಿರುವುದು. ನಿಮಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು...
ಸುದ್ದಿ

ಪುತ್ತೂರು ವಿವೇಕಾನಂದ ಸಂಸ್ಥೆಯಿಂದ ಸಂತ್ರಸ್ತರಿಗೆ ಉಚಿತ ಶಿಕ್ಷಣ ; ಡಾ ಕಲ್ಲಡ್ಕ ಪ್ರಭಾಕರ್ ಭಟ್ ರಿಂದ ಮಹತ್ವದ ನಿರ್ಧಾರ – ಕಹಳೆ ನ್ಯೂಸ್

ಪುತ್ತೂರು : ಕೊಡಗು ಸಂತ್ರಸ್ತ ಮಕ್ಕಳ ನೆರವಿಗೆ ಧಾವಿಸಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಮಾದರಿ ಕೆಲಸವೊಂದಕ್ಕೆ ಮುಂದಾಗಿದೆ.  ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ತೀರ್ಮಾನ ಮಾಡಿದೆ. . ಕೊಡಗು ಸಂತ್ರಸ್ತರಿಗೆ ಆರ್ಥಿಕ ಸಹಾಯ, ದೈನಂದಿನ ಆಹಾರ ಪೂರೈಕೆ ಮಾಡಲು ಸಂಸ್ಥೆ ಹೆಜ್ಜೆ ಇಟ್ಟಿದೆ.  ಸಂಸ್ಥೆ ಪ್ರಾಥಮಿಕ ಶಾಲೆಗಳಿಂದ ತೊಡಗಿ ಪಿಯುಸಿ, ಪದವಿ, ಇಂಜಿನಿಯರಿಂಗ್, ಕಾನೂನು, ಬಿ.ಎಡ್, ಎಂಬಿಎ, ಪಾಲಿಟಿಕ್ನಿಕ್  ಸೇರಿದಂತೆ ಎಲ್ಲ ರೀತಿಯ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಾ ಬಂದಿದೆ. ಪ್ರವಾಹ...
ಸುದ್ದಿ

ನಿಜವಾಯ್ತು ಪೃಥ್ವಿ ಶಾ ಕುರಿತು 10 ವರ್ಷಗಳ ಹಿಂದೆ ಸಚಿನ್ ನುಡಿದಿದ್ದ ಭವಿಷ್ಯ ! – ಕಹಳೆ ನ್ಯೂಸ್

ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಟೂರ್ನಿಯ ಅಂತಿಮ 2 ಪಂದ್ಯಗಳಿಗೆ 18 ವರ್ಷದ ಯುವ ಆಟಗಾರ ಪೃಥ್ವಿ ಶಾ ಅವರನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಶಾ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದು 10 ವರ್ಷದ ಹಿಂದೆ ಸಚಿನ್ ತೆಂಡೂಲ್ಕರ್ ಹೇಳಿದ ಮಾತು ಇಂದು ನಿಜವಾಗಿದೆ. ಶಾ ಭವಿಷ್ಯದ ಕುರಿತು ತನ್ನ ಸ್ನೇಹಿತನಿಗೆ ಹೇಳಿದ್ದ ಮಾತನ್ನು ಸಚಿನ್ ತಮ್ಮ 100MB ಆ್ಯಪ್ ಬಿಡುಗಡೆಯ ವೇಳೆ ರಿವೀಲ್ ಮಾಡಿದ್ದಾರೆ. ಶಾ 8 ವರ್ಷ ಬಾಲಕನಾಗಿದ್ದ ವೇಳೆ...
ಸುದ್ದಿ

ಕೊಡಗಿನ ಒಂದು ಗ್ರಾಮ ದತ್ತು ತೆಗೆದುಕೊಂಡು ಪುನರ್‌ನಿರ್ಮಾಣಕ್ಕೆ ಮುಂದಾದ ಪಲಿಮಾರು ಶ್ರೀಗಳು – ಕಹಳೆ ನ್ಯೂಸ್

ಉಡುಪಿ, ಆ 24 : ಮಹಾಮಳೆ ಮತ್ತು ಜಲಪ್ರಳಯದಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ನಿರಾಶ್ರಿತರ ನೆರವಿಗೆ ಉಡುಪಿಯ ಕೃಷ್ಣ ಮಠ ಮುಂದಾಗಿದ್ದು, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಒಂದು ಗ್ರಾಮವನ್ನು ದತ್ತು ಪಡೆದು ಪುನರ್‌ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.  ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸ್ತ್ರಗಳಲ್ಲಿ ಹೇಳಿರುವಂತೆ ಅಷ್ಟ ಭಾವಪುರುಷಗಳಲ್ಲಿ ದಯೆ ಎಂಬುದು ಭಗವಂತನಿಗೆ ಅತ್ಯಂತ ಪ್ರಿಯವಾದುದು. ಆದ್ದರಿಂದ ಕಷ್ಟದಲ್ಲಿರುವವರಿಗೆ ಕರುಣೆ...
ಸುದ್ದಿ

ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಆ. 26 ರಂದು ವಿಠಲ್ ನಾಯಕ್ ವಿಟ್ಲ ಅವರಿಂದ ‘ಗೀತ ಸಾಹಿತ್ಯ ಸಂಭ್ರಮ’ – ಕಹಳೆ ನ್ಯೂಸ್

ಪುತ್ತೂರು ಎ 25 : ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಆ. 26 ಶನಿವಾರದಂದು ಅಪರಾಹ್ನ 2:00ರಿಂದ 4:00ವರೆಗೆ ಕಲಾವಿದ ವಿಠಲ್ ನಾಯಕ್ ವಿಟ್ಲ ಅವರಿಂದ ‘ಗೀತ ಸಾಹಿತ್ಯ ಸಂಭ್ರಮ’ ನಡೆಯಲಿದೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತವನ್ನು ಬಯಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಸಂಚಾಲಕ ಪಿ. ವಿ. ಗೋಕುಲ್‍ನಾಥ್ ತಿಳಿಸಿದ್ದಾರೆ....
ಸುದ್ದಿ

ಕಾಣಿಯೂರು ಶ್ರೀಗಳ ಚಾತುರ್ಮಾಸ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ; ಎಂ ವೇಣುಗೋಪಾಲ್ ಪುತ್ತೂರು ಬಳಗಕ್ಕೆ ಶ್ರೀಗಳಿಂದ ಗೌರವ – ಕಹಳೆ ನ್ಯೂಸ್

ಪುತ್ತೂರು : ಸಂಪ್ಯದ ಉದಯಗಿರಿ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಣಿಯೂರು ಶ್ರೀಗಳ ಚಾತುರ್ಮಾಸ್ಯ ಮಹೋತ್ಸವದಲ್ಲಿ ಉಮೇಶ್ ದೇವಾಡಿಗ ಪುತ್ತೂರು ಹಾಗೂ ಅವರ ಮಗ ಎಂ ವೇಣುಗೋಪಾಲ್ ಪುತ್ತೂರು ( ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಶಿಷ್ಯ ) ರವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ಶ್ರೀಗಳು ಕಾರ್ಯಕ್ರಮದ ನಂತರ ಕಲಾವಿದರನ್ನು ಸನ್ಮಾನಿಸಿದರು....
1 1,386 1,387 1,388 1,389 1,390 1,459
Page 1388 of 1459