Saturday, May 2, 2026

archivekahale news

ಸುದ್ದಿ

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಗೋಸ್ವರ್ಗ ಚಾತುರ್ಮಾಸ್ಯ ; ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ – ಕಹಳೆ ನ್ಯೂಸ್

ರಾಮಪಟ್ಟಾಭಿಷೇಕದ ಮೂಲಕ ತ್ರೇತಾಯುಗವನ್ನು ಮರಳಿ ನೆನಪಿಸುವ ಕಾರ್ಯ ಮಾಡಲಾಗುತ್ತದೆ. ಶ್ರೀರಾಮಪಟ್ಟಾಭಿಷೇಕದ ನೈಜ ಸ್ವಾಧ, ಆನಂದ ಸಿಗಬೇಕಾದರೆ ಹಿಂದಿನ ರಾಮಾಯಣದ ಅಧ್ಯಯನ ಮಾಡಬೇಕು. ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಮನ ರಾಜತ್ವವನ್ನು ಪ್ರತಿಯೊಬ್ಬರೂ ಅಂಗೀಕರಿಸಿದ್ದೀರಿ ಎಂದು ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಅವರು ಬುಧವಾರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಗೋಸ್ವರ್ಗ ಚಾತುರ್ಮಾಸ್ಯ ಶುಭಸಂದರ್ಭದಲ್ಲಿ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಸೇವೆಯ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ...
ಸಿನಿಮಾ

‘ ನಾನೇ ರುಕ್ಕು, ಕೊಡ್ತೀನಿ ಒಂದು ಲುಕ್ಕು, ನಾನಂದ್ರೆ ಫ‌ುಲ್ಲು ಕಿಕ್ಕು ‘ ; ನೀತು ಕಿಕ್‌ ಗೆ ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ – ಕಹಳೆ ನ್ಯೂಸ್

ವಿಠ್ಠಲ್ ಭಟ್ ನಿರ್ದೇಶನದ ರಮಣಿ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ .ಡಿ ಅವರ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ "ಹ್ಯಾಂಗೋವರ್' ಚಿತ್ರದ ಸ್ಪೆಷಲ್ ಐಟಂ ಸಾಂಗ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೌದು! ಗಾಳಿಪಟ ಚಿತ್ರದ ಗಂಡುಬೀರಿ ಹುಡುಗಿ ನೀತು "ಹ್ಯಾಂಗೋವರ್' ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ.  ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಸುಮಾರು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಅಲ್ಲದೇ ನೀತು ಅವರ ಸಿನಿಮಾ ಜರ್ನಿಯಲ್ಲಿ ಇದು ನನ್ನ "ದಿ ಬೆಸ್ಟ್...
ರಾಜಕೀಯ

ಶಿ ಈಸ್ ವೆರಿ ಗ್ಲ್ಯಾಮರಸ್ ಮಿನಿಸ್ಟರ್ ; ಜಯಮಾಲಾರನ್ನು ಹಾಡಿಹೊಗಳಿದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ – ಕಹಳೆ ನ್ಯೂಸ್

ಉಡುಪಿ: ಸ್ಥಳೀಯ ಚುನಾವಣೆ ಪ್ರಚಾರದಲ್ಲಿ ಜಯಮಾಲಾ ಗಾಳಿ ಎದ್ದಿದೆ. ಜಯಮಾಲಾರಷ್ಟು ಗ್ಲಾಮರ್ ಯಾರಿಗಿದೆ ಹೇಳಿ? ಶಿ ಈಸ್ ವೆರಿ ಗ್ಲ್ಯಾಮರಸ್ ಡಿಸ್ಟ್ರಿಕ್ಟ್ ಮಿನಿಸ್ಟರ್ ಎಂದು ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಜಯಮಾಲಾರನ್ನು ಹೊಗಳಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಉಡುಪಿಯ ಪ್ರೆಸ್ ಕ್ಲಬ್‍ನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸಚಿವೆ ಜಯಮಾಲಾರನ್ನು ಹಾಡಿಹೊಗಳಿದರು. ಚುನಾವಣೆಗೆ ಜಿಲ್ಲೆಯಾದ್ಯಂತ ಹೆಚ್ಚು ಓಡಾಟ ನಡೆಸದಿದ್ದರೂ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಜಯಮಾಲಾ ಗಾಳಿ...
ಸುದ್ದಿ

ಕಾಸರಗೋಡು ಕನ್ನಡ ಮಕ್ಕಳ ಹೋರಾಟಕ್ಕೆ ಗೆಲುವು ; ದಿಗ್ಬಂಧನಕ್ಕೆ ಮಣಿದು ರಜೆ ಮೇಲೆ ತೆರಳಿದ ಮಲಯಾಳ ಶಿಕ್ಷಕ – ಕಹಳೆ ನ್ಯೂಸ್

ಕಾಸರಗೋಡು, ಆ 29 : ಕನ್ನಡ ಮಾಧ್ಯಮ ಶಾಲೆಗೆ ಮಲಯಾಳ ಶಿಕ್ಷಕನ ನೇಮಕ ವಿರುದ್ಧ ಕನ್ನಡಿಗರ ಹೋರಾಟಕ್ಕೆ ತಾತ್ಕಾಲಿಕ ಗೆಲುವು ಲಭಿಸಿದೆ. ಕಳೆದ ಒಂದು ತಿಂಗಳಿನಿಂದ ಮಂಗಲ್ಪಾಡಿ ಸರಕಾರಿ ಶಾಲಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದು , ಹೋರಾಟಕ್ಕೆ ಪೋಷಕರು , ಕನ್ನಡ ಹೋರಾಟ ಸಮಿತಿ , ಕನ್ನಡ ಭಾಷಾಭಿಮಾನಿಗಳು, ಹಾಗೂ ವಿವಿಧ ಪಕ್ಷ , ಸಂಘಟನೆಗಳ ಬೆಂಬಲ ಲಭಿಸುವ ಮೂಲಕ ಕನ್ನಡಿಗರ ಹಕ್ಕಿಗಾಗಿರುವ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ಮಂಗಲ್ಪಾಡಿ ಸರಕಾರಿ...
ಸುದ್ದಿ

ಮರಗಳ್ಳತನ ಮಾಡಲು ಹೋಗಿ ಶವವಾದ ; ಕಾಡಿನಲ್ಲೇ ಮೃತದೇಹ ಬಿಟ್ಟು ಪರಾರಿಯಾದ ಮರಕಳ್ಳರ ಗುಂಪು – ಕಹಳೆ ನ್ಯೂಸ್

ಸುಳ್ಯ, ಆ 29 : ಮೀಸಲು ಅರಣ್ಯದಿಂದ ಮರ ಕಳ್ಳತನ ನಡೆಸಲು ಹೋದ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ತಾವು ಕಡಿಯುತ್ತಿದ್ದ ಮರದಡಿಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯ ನೆಲ್ಲೂರು ಕೆಮ್ಯಾಜೆ ಗ್ರಾಮದ ಮರ್ಕಂಜದ ಬೊಮ್ಮಾರು ಬಳಿಯ ತುಂಬೆತಡ್ಕ ಎಂಬಲ್ಲಿ ನಡೆದಿದೆ. ಮರ್ಕಂಜದ ಬೊಮ್ಮಾರು ಬಳಿಯ ತುಂಬೆತಡ್ಕ ಮೀಸಲು ಅರಣ್ಯಕ್ಕೆ ಸೇರಿದ ಕಾಡಿನಲ್ಲಿ ಈ ದುರ್ಘಟನೆ ನಡೆದಿದ್ದು ಮರ ಕಡಿಯುವ ಗುಂಪಿನಲ್ಲಿದ್ದ ಲೋಕನಾಥ ಬುಡಾಲೆ ಎಂಬವರು ಮರದಡಿಗೆ ಬಿದ್ದು ಮೃತಪಟ್ಟ ವ್ಯಕ್ತಿ. ಈ ಸಮಯದಲ್ಲಿ...
ಸುದ್ದಿ

ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ವಿದ್ಯಾ ಗಣಪತಿ ಉತ್ಸವ ಸಮಿತಿ ರಚನೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನ ಚತುರ್ಥ ವರ್ಷದ ವಿದ್ಯಾ ಗಣಪತಿ ಉತ್ಸವ ಕಾರ್ಯ ಸಮಿತಿ ರಚನೆಗೊಂಡಿತು. ಆಗಸ್ಟ್ 29 ಗುರುವಾರದಂದು ಸಂಸ್ಥೆಯ ಆಡಳಿತ ಮಂಡಳಿಯು ಪದಾಧಿಕಾರಿಗಳನ್ನು ನೇಮಿಸಿತು. ವಿದ್ಯಾ ಗಣಪತಿ ಉತ್ಸವ ಸಮಿತಿ ವಿದ್ಯಾರ್ಥಿ ಅಧ್ಯಕ್ಷನಾಗಿ ದ್ವಿತೀಯ ಪಿ.ಯು.ಸಿ ಕಲಾ ವಿಭಾಗದ ಪುನೀತ್ ಆಯ್ಕೆಯಾದÀರು. ಕಾರ್ಯಾದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಅನೂಪ್ ಮತ್ತು ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ...
ರಾಜಕೀಯ

ನಗರಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ದೀಕ್ಷಾ ಪೈ ಪರ ಅಶೋಕ್ ಕುಮಾರ್ ರೈ ಪ್ರಚಾರ – ಕಹಳೆ ನ್ಯೂಸ್

ನಗರಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ದೀಕ್ಷಾ ಪೈ ಪರ ಬಿಜೆಪಿ ಜಿಲ್ಲಾ ಕಾಂiÀರ್iಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಬಪ್ಪಳಿಗೆ ಪರಿಸರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದರು.   ಈ ಸಂದರ್ಭದಲ್ಲಿ ಬಿಜೆಪಿ ವಾರ್ಡ್ ಉಸ್ತುವಾರಿ ಜಯಶ್ರೀ ಶೆಟ್ಟಿ, ರಾಜಾರಾಮ ಶೆಟ್ಟಿ ಕೋಲ್ಪೆ,ಮಾಜಿ ಪುರಸಭಾ ಸದಸ್ಯೆ ಪ್ರಭಾ, ಯುವಮೋರ್ಚಾದ ಶಶಿಧರ್ ನಾಯ್ಕ್ ಕೆಮ್ಮಾಯಿ,ರೆಮಂತ್ ಗೌಡ ಸೇರಿದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು...
ಸುದ್ದಿ

Big Breaking : ಹಿಂದೂಗಳ ಭಾವನೆಗೆ ಧಕ್ಕೆ ; ನಟ ಪ್ರಕಾಶ್ ರೈಗೆ ಸಂಕಷ್ಟ – ಕಹಳೆ ನ್ಯೂಸ್

ಬೆಂಗಳೂರು (ಆ. 28): ಹಿಂದೂಗಳ ಭಾವನೆ ಕೆರಳಿಸಿದ ಆರೋಪದ ಮೇಲೆ ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.   ಗೋವುಗಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ವಕೀಲ ಎನ್​.ಕಿರಣ್​ ಎಂಬುವವರು ದೂರು ಸಲ್ಲಿಸಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಗೋವುಗಳ ಬಗ್ಗೆ ಪ್ರಕಾಶ್ ರೈ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.  ಹಲವೆಡೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿರುವುದು ಇದಕ್ಕೆ ಸೇರಿದೆ. ಪ್ರಕಾಶ್​ ರೈ​ ವಿರುದ್ಧ ಶಿಸ್ತು...
1 1,384 1,385 1,386 1,387 1,388 1,459
Page 1386 of 1459