ವೀರ ಸಾವರ್ಕರ್ ಪುಣ್ಯತಿಥಿಯ ಪೋಸ್ಟ್ ಹಾಕಿದ ಕರ್ನಾಟಕ ಮುಖ್ಯಮಂತ್ರಿ ; ದೇಶದ್ರೋಹಿ ಎಂದು ಕಮೆಂಟ್ ಅನ್ನು ಹಾಕಿದ ಉಪನ್ಯಾಸಕ ವಿಶಾಕ್ ಜಿ ಶೆಟ್ಟಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಉಡುಪಿ ಅಪರ ಜಿಲ್ಲಾಧಿಕಾರಿಗಳಿಗೆ ABVP ಉಡುಪಿ ನಗರ ವತಿಯಿಂದ ಮನವಿ-ಕಹಳೆ ನ್ಯೂಸ್
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸ್ವಾತಂತ್ರ ಹೋರಾಟಗಾರರಾದ ವೀರ ಸಾವರ್ಕರ್ ಅವರ ಪುಣ್ಯತಿಥಿಯ ಪೋಸ್ಟ್ ಫೇಸ್ಬುಕ್ನಲ್ಲಿ ಹಾಕಿದ್ದರು. ಈ ಒಂದು ಪೋಸ್ಟ್ ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಉಪನ್ಯಾಸಕರಾದ ವಿಶಾಕ್ ಜಿ ಶೆಟ್ಟಿ ಅವರು ದೇಶದ್ರೋಹಿ ಎಂದು ಕಮೆಂಟ್ ಅನ್ನು ಮಾಡಿರುತ್ತಾರೆ. ಕಮೆಂಟ್ ಮಾಡುವುದು ಅವರವರ ವ್ಯಕ್ತಿಗತ ಸ್ವಾತಂತ್ರ್ಯ ಆದರೆ, ಒಂದು ಸರ್ಕಾರಿ ಅನುದಾನಿತ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ರಾಜ್ಯದ ಮುಖ್ಯಮಂತ್ರಿಯ ವಿರುದ್ಧ ಕಮೆಂಟ್ ಮಾಡುವುದು ಎಷ್ಟು ಸರಿ. ಅಲ್ಲದೇ...







