Friday, June 19, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಜೋಕಾಲಿಯಲ್ಲಿ ಆಡುತ್ತಿದ್ದ ಬಾಲಕನ ಕುತ್ತಿಗೆಗೆ ಸುತ್ತಿದ ಹಗ್ಗ; ಬಾಲಕನ ದಾರುಣ ಸಾವು-ಕಹಳೆ ನ್ಯೂಸ್

ಅರೂರ್/ಕೋಲಂಚೇರಿ : ಪೋಷಕರು ಮಕ್ಕಳ ವಿಚಾರದಲ್ಲಿ ಎಷ್ಟು ಜಾಗೃತರಾಗಿದ್ದರೂ ಸಾಕಾಗುವುದಿಲ್ಲ ಎಂದು ಹೇಳುತ್ತಾರೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ಆಟವಾಡುತ್ತಿದ್ದ ಬಾಲಕನ ದುರಂತ ಅಂತ್ಯವಾಗಿದೆ. ನಾಡುವತ್ನಗರ ಎನ್.ಐ. ಯುಪಿಎಸ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಕವುಕುಟ್ಟು ವಿಪಿಂಡಾಸ್ ಮತ್ತು ಬೀನಾ ಅವರ ಹಿರಿಯ ಮಗ ವೈಷ್ಣವ್ ಅರುಕುಟ್ಟಿ. ಮನೆಯವರು ಅವರ ಕೆಲಸದಲ್ಲಿ ನಿರತರಾಗಿದ್ದರು. ಈ ಬಾಲಕ ತನ್ನಷ್ಟಕ್ಕೆ ತಾನು ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಜೋಕಾಲಿಯ ಹಗ್ಗ ಕುತ್ತಿಗೆಗೆ ಸುತ್ತಿಕೊಂಡಿದ್ದು, ಪರಿಣಾಮವಾಗಿ ಬಾಲಕನಿಗೆ...
ಹೆಚ್ಚಿನ ಸುದ್ದಿ

ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಿಂದ 317 ಬಾಲಕಿಯರ ಸಾಮೂಹಿಕ ಅಪಹರಣ-ಕಹಳೆ ನ್ಯೂಸ್

ಲಾಗೋಸ್ : ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಿಂದ 317 ಬಾಲಕಿಯರನ್ನು ಬಂದೂಕುಧಾರಿಗಳು ಶುಕ್ರವಾರ ಅಪಹರಿಸಿರುವ ಘಟನೆ ನಡೆದಿದೆ. ಇಲ್ಲಿನ ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್‌ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಶಾಲೆಯ ಹತ್ತಿರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಈ ಬಗ್ಗೆ ಎಲ್ಲಾ...
ಹೆಚ್ಚಿನ ಸುದ್ದಿ

ಎಕ್ಸಲೆಂಟ್ ಮೂಡಬಿದಿರೆ; ಡಾ|| ಶ್ರೀ ಶ್ರೀ ರಾಮಚಂದ್ರ ಗುರೂಜಿಯವರಿಂದ ಆಧ್ಯಾತ್ಮಿಕ ಶಿಬಿರ –ಕಹಳೆ ನ್ಯೂಸ್

“ಸಕಾರಾತ್ಮಕ ಚಿಂತನೆಯುಳ್ಳ ವ್ಯಕ್ತಿ ಎಲ್ಲಾ ಕಾಲದಲ್ಲಿ ದೊರಕುವ ಸಿಹಿಯಾದ ಹಣ್ಣಿಗೆ ಸಮಾನ. ನಮ್ಮ ಎಲ್ಲಾ ಒಳಿತು ಕೆಡುಕುಗಳಿಗೆ ಮನಸ್ಸೇ ಮೂಲ ಕಾರಣ” ಎಂದು ಪ್ರಖ್ಯಾತ ಅಂತಾರಾಷ್ಟ್ರಿಯ ಆಧ್ಯಾತ್ಮಿಕ ಗುರು ಡಾ|| ಶ್ರೀ ಶ್ರೀ ರಾಮಚಂದ್ರ ಗುರೂಜಿಯವರು ಮಾತನಾಡಿದರು. ಅವರು ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ ಆಧ್ಯಾತ್ಮಿಕ ಮತ್ತು ಮನೋವಿಜ್ಞಾನ ಶಿಬಿರವನ್ನು ನಡೆಸಿಕೊಡುತ್ತಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುವಲ್ಲಿ ಸೂಕ್ತ ಮಾರ್ಗದರ್ಶನ ನೀಡಿದರು. “ಸುಪ್ತ ಮನಸ್ಸಿಗೆ ಗುಣಾತ್ಮಕ ಶಕ್ತಿಯನ್ನು ತುಂಬಿದರೆ ಜೀವನದ ಸವಾಲುಗಳಿಗೆ ಉತ್ತರಿಸಲು...
ಹೆಚ್ಚಿನ ಸುದ್ದಿ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಗರಡಿಯಲ್ಲಿ ಶ್ರೀ ಆದಿ ಬೈದರುಗಳ ನೇಮೋತ್ಸವ-ಕಹಳೆ ನ್ಯೂಸ್

ಪಂಜ : ಫೆಬ್ರವರಿ 26 ರಂದು ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಗರಡಿಯಲ್ಲಿ ರಾತ್ರಿ ಶ್ರೀ ಆದಿ ಬೈದರುಗಳ ನೇಮೋತ್ಸವವು ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ನಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್, ನಾರಾಯಣ ಗೌಡ ಕೋರ್ಜೆ, ವ್ಯಚಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ದಿನೇಶ್ ಗರಡಿ, ರಾಮಚಂದ್ರ ಭಟ್, ಶಂಕರ್ ಕುಮಾರ್, ಲಕ್ಷ್ಮಣ ಗೌಡ ಆಕ್ರಿಕಟ್ಟೆ,...
ಹೆಚ್ಚಿನ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಪ್ರಕರಣ; ಯುವಕ ಸೈಬರ್ ಕ್ರೈಂ ಪೊಲೀಸರ ವಶಕ್ಕೆ-ಕಹಳೆ ನ್ಯೂಸ್

ಆಲಂಕಾರು : ಮಂಗಳೂರು ಸೈಬರ್ ಕ್ರೈಂ ಪೊಲೀಸರು ವಾಟ್ಸಾಪ್ ನಲ್ಲಿ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿದ ಆರೋಪದ ಮೇಲೆ ಬಡಗನ್ನೂರು ಕೊಯಿಲದ ಯುವಕನೋರ್ವನನ್ನು ವಶಕ್ಕೆ ಪಡೆದಿದ್ದಾರೆ. ಕೂರ್ನಡ್ಕದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್, ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿ ಕೋಮು ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಪೊಲೀಸರಿಗೆ ಇತ್ತೀಚೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಮೊಬೈಲ್...
ಹೆಚ್ಚಿನ ಸುದ್ದಿ

ವೃತ್ತಿಪರ ಸಾಧನೆ ಮತ್ತು ಸೇವೆಗಳು ಸಮಾಜದಲ್ಲಿ ಘನತೆಯೊಂದಿಗೆ ಜೀವನದ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ; ಪ್ರಾಂಶುಪಾಲ ಕೆ.ಎಸ್ ಈರಣ್ಣ.-ಕಹಳೆ ನ್ಯೂಸ್

ಹೊಳವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಟಿ.ಎನ್ ರವಿಪ್ರಕಾಶ್‍ಗೆ ಡಾಕ್ಟರೇಟ್ ಪದವಿ ದೊರೆತ ಹಿನ್ನಲೆಯಲ್ಲಿ ಸನ್ಮಾನಿಸಿ ಮಾತನಾಡಿದ ಕಾಲೇಜಿನ ; ಪ್ರಾಂಶುಪಾಲ ಕೆ.ಎಸ್ ಈರಣ್ಣ ಅವರು, ಸಮಾಜದಲ್ಲಿ ಸಾಧನೆಗಳನ್ನು ವಿವಿಧ ರಂಗಗಳಲ್ಲು ಸಹ ಸಾಧಿಸಬಹುದು. ಅದೇ ರೀತಿಯಾಗಿ ವೃತ್ತಿ ಬದುಕಿನಲ್ಲೂ ಸಹ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳನ್ನು ಮಾಡಬಹುದೆಂದು ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೇರಿಕಾದಿಂದ ಡಾಕ್ಟರ್ ಆಫ್ ಲೆಟರ್ ಗೆ ಹಾನರರಿ ಡಾಕ್ಟರೇಟ್ ಅವಾರ್ಡ್‍ನ್ನು ಪಡೆದಿರುವ ನಮ್ಮ ಕಾಲೇಜಿನ...
ಹೆಚ್ಚಿನ ಸುದ್ದಿ

ನೆಲ್ಯಾಡಿಯಲ್ಲಿ ಅನಿಲ ಸಾಗಾಟದ ಟ್ಯಾಂಕರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ-ಕಹಳೆ ನ್ಯೂಸ್

ನೆಲ್ಯಾಡಿ : ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ಅನಿಲ ಸಾಗಾಟದ ಟ್ಯಾಂಕರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಡೀಸೆಲ್ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಟ್ಯಾಂಕರ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಡೀಸೆಲ್‍ನ ಟ್ಯಾಂಕರ್ ನಡುವೆ ಹೊಸಮಜಲು ಸಮೀಪ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ಡೀಸೆಲ್ ಟ್ಯಾಂಕರ್...
ಹೆಚ್ಚಿನ ಸುದ್ದಿ

ಸಕಲಕಲವಲ್ಲಭ, ರೇಡಿಯೋ ಸ್ಟಾರ್; ‘ಎನ್.ವ್ಹಿ ರಮೇಶ್’-ಕಹಳೆ ನ್ಯೂಸ್

ಸಾಧಕರ ಪರಿಚಯ : ಬಣ್ಣ ಹಚ್ಚಿದರೆ ಅದ್ಭುತ ನಾಟಕಕಾರ, ವೇದಿಕೆ ಮೇಲೆ ನಿಂತರೆ ಮಾತುಗಾರ, ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟರೆ ಲೋಕಜ್ಞಾನವನ್ನು ಧಾರೆ ಎರೆಯುವ ವಿಚಾರವಂತ. ಚಲನ ಚಿತ್ರ ಕ್ಷೇತ್ರ, ಸಂಗೀತ ಕ್ಷೇತ್ರದ ಜೊತೆ ಸಂಪರ್ಕ ಹೊಂದಿರುವ ಕಲಾವಿದ. ಮಕ್ಕಳಿಗೆ, ಮಹಿಳೆಯರಿಗೆ, ಹರಿಹರೆಯದ ಯುವಕ- ಯುವತಿಯರಿಗೆ ಸರಣಿ ಕಾರ್ಯಕ್ರಮಗಳನ್ನು ನಡೆಸಿದ ಕಾರ್ಯಕ್ರಮ ಸಂಯೋಜಕ, ದೂರದರ್ಶನ ಚಂದನದ, ಹಂಗಾಮಿ ಪ್ರಸಾರ ನಿರ್ವಾಹಕ, ಕವನ, ಲೇಖನಕಾರ, ಪ್ರಶಸ್ತಿಗಳ ಸರದಾರನೇ ‘ಎನ್.ವ್ಹಿ ರಮೇಶ್’. ರೇಡಿಯೋ, ಈ...
1 89 90 91 92 93 174
Page 91 of 174