ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ಸಮನಾದ ಹಕ್ಕು ಕಲ್ಪಿಸಿ ; ಡಾ.ಕೆ.ಸುಧಾಕರ್-ಕಹಳೆ ನ್ಯೂಸ್
ಬಾಗೇಪಲ್ಲಿ : ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುನ್ನು ಕಲ್ಪಿಸಿದಾಗ ಮಾತ್ರ ಸಮಸಮಾಜವಾಗಿ ದೇಶ ಉದ್ಧಾರವಾಗಲಿದೆ, ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸ ಬೇಕು, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು. ಪಟ್ಟಣದ ಹೊರವಲಯದ ನಾಗೇಪಲ್ಲಿ ಟೋಲ್ ಬಳಿ ಮಯೂರಿ ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ನೂತನ ಗಾಮೆರ್ಂಟ್ಸ್ ಶಾಖೆ ಶನಿವಾರ ಉದ್ಘಾಟಿಸಿ ಮಾತನಾಡಿ, ಯಾವುದೇ ಪಕ್ಷಿ ರೆಕ್ಕೆ...







