Sunday, June 14, 2026

ಸುದ್ದಿ

ಸುದ್ದಿ

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

  ಶವರಿಮಲೆ : ಪ್ರತಿವರ್ಷದಂತೆ ಈ ಬಾರಿಯೂ ಶವರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವನ್ನು ಪಡೆದ ಭಕ್ತರು ಪುನೀತರಾಗಿದ್ದಾರೆ. ಈ ಬಾರಿ ಮಕರ ಜ್ಯೋತಿ ಭಾನುವಾರ ಸಂಜೆ 6.44ರ ಸುಮಾರಿಗೆ ಕಾಣಿಸಿಕೊಂಡಿತು. ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡರು. ಈ ವಿಶೇಷವು ಪ್ರತಿ ವರ್ಷ ಜನವರಿ 14 ರ ಸಂಜೆ ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿ ದರ್ಶನವಾಗುತ್ತದೆ. ಜ್ಯೋತಿ ಕಾಣಿಸಿಕೊಂಡ ತಕ್ಷಣ ನೆರೆದಿದ್ದ...
ಸುದ್ದಿ

ಅಯೋಧ್ಯೆ ರಾಮಜನ್ಮ ಭೂಮಿ ಹೋರಾಟದ ಮುಂಚೂಣಿ ನಾಯಕ ” ಕಲ್ಲಡ್ಕ ಡಾ. ಪ್ರಭಾಕರ್ ಭಟ್ ” – ಅಯೋಧ್ಯೆ ಹೋರಾಟದ ಸಂಪೂರ್ಣ ವರದಿ – ಕಹಳೆ ನ್ಯೂಸ್

  ಡಾ ಕಲ್ಲಡ್ಕ ಪ್ರಭಾಕರ್ ಭಟ್ ಇದು ಕೇವಲ ಒಂದು ಹೆಸರು ಮಾತ್ರವಲ್ಲ, ದಕ್ಷಿಣ ಭಾರತದ ಮಾಹಾನ್ ಶಕ್ತಿ, ಹಿಂದುತ್ವದ ಹರಿಕಾರ! ಅಪ್ಪಟ ದೇಶಪ್ರೇಮಿ, ಹೌದು ಇವರು ವ್ಯಕ್ತಿಯಿಂದ ಶಕ್ತಿಯಾದವರು ಸಂಘದ ಸ್ವಯಂ ಸೇವಕನಾಗಿ ಪ್ರಚಾರಕನಾಗಿ ತನ್ನ ಜೀವನವನ್ನೇ ಸಮಾಜಕ್ಕೆ ಸಮರ್ಪಿಸಿದ ಮಾಹಾತ್ಯಾಗಿ, ತುರ್ತು ಪರಿಸ್ಥಿತಿಯಲ್ಲಿ ದಂಪತಿ ಸಹಿತವಾಗಿ ಜೈಲಿನಲ್ಲಿದ್ದ ಏಕೈಕ ಉದಾಹರಣೆ ಇದ್ದರೆ ಅದು ಇದೇ ಕಲ್ಲಡ್ಕ ಡಾಕ್ಟ್ರು ಮತ್ತೆ ಅತ್ತಿಗೆ ( ಕಮಲಮ್ಮ). ಅಯೋಧ್ಯೆ ರಾಮಜನ್ಮ ಭೂಮಿ...
ಸುದ್ದಿ

ಏರ್’ಪೋರ್ಟ್’ನಲ್ಲಿ ಖಾದರ್ ಎಂದಾಕ್ಷಣ 2 ಬಾರಿ ತಪಾಸಣೆ

  Highlights : ವಿಮಾನ ನಿಲ್ದಾಣದಲ್ಲಿ ‘ಖಾದರ್’ ಎಂದಾಕ್ಷಣ ಸ್ವತಃ ತಮ್ಮನ್ನೂ ಅನೇಕ ಸಂದರ್ಭದಲ್ಲಿ ಅನುಮಾನದಿಂದ ಎರಡೆರಡು ಬಾರಿ ಪರಿಶೀಲಿಸಿದ್ದು, ಬೇಸರ ಮೂಡಿಸಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಧಾರವಾಡ : ವಿಮಾನ ನಿಲ್ದಾಣದಲ್ಲಿ ‘ಖಾದರ್’ ಎಂದಾಕ್ಷಣ ಸ್ವತಃ ತಮ್ಮನ್ನೂ ಅನೇಕ ಸಂದರ್ಭದಲ್ಲಿ ಅನುಮಾನದಿಂದ ಎರಡೆರಡು ಬಾರಿ ಪರಿಶೀಲಿಸಿದ್ದು, ಬೇಸರ ಮೂಡಿಸಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ವೆಲ್ಫೇರ್ ಅಸೋಸಿಯೇಶನ್ ಆಯೋಜಿಸಿದ್ದ...
ಸುದ್ದಿ

ಮಲ್ಪೆ ಕಡಲತೀರದಲ್ಲಿ ವಿಶ್ವದಾಖಲೆಯಾದ ವಂದೇಮಾತರಂ | ಸಹಸ್ರ ಕಂಠಗಳಿಂದ ಮೊಳಗಿತು ಭಾರತದ ಜೀವಗೀತೆ

ಮಲ್ಪೆ: ಮಲ್ಪೆ ಕಡಲತೀರದಲ್ಲಿ ಶನಿವಾರ ಸಂವೇದನಾ ಫೌಂಡೇಶನ್ ವತಿಯಿಂದ ಸ್ವಾಮಿ ವಿವೇಕಾನಂದರ 155ನೇ ಜಯಂತಿಯ ಅಂಗವಾಗಿ ವಂದೇಮಾತರಂ ರಣಮಂತ್ರದುಚ್ಚಾರ ಕಾರ್ಯಕ್ರಮ ಜರಗಿತು. ಭವಿಷ್ಯಕ್ಕಾಗಿ ಪ್ರಕೃತಿಯನ್ನು ರಕ್ಷಿಸಿ ಎಂಬ ಸಂದೇಶವನ್ನೂ ಇಲ್ಲಿ ರವಾನಿಸಲಾಯಿತು. ವಂದೇಮಾತರಂ ರಣಮಂತ್ರದುಚ್ಚಾರ ವಿಶ್ವದಾಖಲೆಯೂ ಆಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ ಕಾಲೇಜುಗಳಿಂದ ಸುಮಾರು 4,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ವಂದೇ ಮಾತರಂ ಗೀತೆಯನ್ನು ಹಾಡಿದರು. ಇದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿತು. ಇದಕ್ಕೂ ಮುನ್ನ...
ಸುದ್ದಿ

ಜ.31 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶವೂ ವಿಲ್ಲ, ಸೇವೆಗಳೂ ಇಲ್ಲ !

  ಸುಬ್ರಹ್ಮಣ್ಯ : ಜನವರಿ 31 ರಂದು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಯಾವುದೇ ಪೂಜೆವೂ ಬೆಳಗ್ಗೆ 9.00 ರಿಂದ ಮತ್ತೆ ನಡೆಯೂದಿಲ್ಲ. ಇತ್ತ ಗಮನಿಸಿ. ಅಂದು ದೇವಾಲಯದಲ್ಲಿ ಯಾವುದೇ ತರಹದ ಸೇವೆಗಳು ನೆರವೇರುವುದಿಲ್ಲ. ಇದೀಗ ದೇವಾಲಯದ ಆಡಳಿತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದೆ. ಆದ್ದರಿಂದ ಆ ದಿನ ಭೇಟಿ ನೀಡುವ ಭಕ್ತಾದಿಗಳಿಗೆ ದೇವರ ದರ್ಶನವಿರುವುದಿಲ್ಲ. ಆ ದಿನ ಗ್ರಹಣವಿರುವುದರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರೀ ದೇವರ ದರ್ಶನ ಬೆಳಗ್ಗೆ 9...
ಸುದ್ದಿ

ನಾಳೆ ರಾಮಕುಂಜದಲ್ಲಿ ‘ಯಕ್ಷ ಸಂಕ್ರಾಂತಿ ‘- ಬಾಲ ಯಕ್ಷೋತ್ಸವ

  ರಾಮಕುಂಜ : ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಾಳೆ ( ಜ. 14 ) ರಂದು ಬೆಳಗ್ಗೆ 9.30 ರಿಂದ ಸಂಜೆ 5.30ರ ವರೆಗೆ ಆಹ್ವಾನಿತ ತಂಡಗಳಿಂದ " ಯಕ್ಷ ಸಂಕ್ರಾಂತಿ " ಬಾಲ ಯಕ್ಷೋತ್ಸವ ನಡೆಯಲಿದೆ. ಕಾರ್ಯಕ್ರಮವನ್ನು ಖ್ಯಾತ ಯಕ್ಷಗಾನ ಸ್ತ್ರೀ ವೇಶಧಾರಿ ಅಂಬಾ ಪ್ರಸಾದ್ ಪಾತಾಳ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ.ಎಸ್. ವಹಿಸಲಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಯಕ್ಷಗಾನ ಕಲಾವಿದ ಕೊಕ್ಕಡ...
ಸುದ್ದಿ

ಯಕ್ಷಗಾನದಲ್ಲಿ  ಮುಸ್ಲಿಂ ಸಮುದಾಯ ಅವಹೇಳನ ಆರೋಪ 

  ಮಂಗಳೂರು: ಯಕ್ಷಗಾನ ಪ್ರದರ್ಶನವೊಂದರಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪಿಸಿ, ಇದಕ್ಕೆ ವಿರೋಧ ವ್ಯಕ್ತಪಡಿಸುವಂತೆ ಮುಸ್ಲಿಂ ಸಂಘಟನೆಗಳಿಗೆ ಅನಾಮ ಧೇಯ ವ್ಯಕ್ತಿಗಳು ಕರೆ ನೀಡುವ ಬರಹಗಳು ಸಾಮಾಜಿಕ ಜಾಲ ತಾಣಗಳಲ್ಲಿ ರವಾನೆಯಾಗುತ್ತಿವೆ. ಈ ಯಕ್ಷಗಾನ ಪ್ರಸಂಗದ ವಿರುದ್ಧ ಭಾರೀ ವಿರೋಧ ವ್ಯಕ್ತಪಡಿಸು ವಂತೆ ಜಾಲತಾಣಗಳಲ್ಲಿ ಬರಹ ಪ್ರಕಟಿಸ ಲಾಗಿದ್ದು, "ಯಕ್ಷಗಾನ ಪ್ರದರ್ಶನವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಅಭಿನಯಿಸಿದ ಕಲಾವಿದರು ದಾರಿ ಹೆಣವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂಬ...
ಸುದ್ದಿ

ಆಳ್ವಾಸ್ ವಿರಾಸತ್ | ದ್ವೇಷ ಬಿಟ್ಟು ಸಾಮರಸ್ಯದ ಬದುಕಿನ ದೇಶ ಕಟ್ಟೋಣ – ಡಾ. ವೀರೇಂದ್ರ ಹೆಗ್ಗಡೆ

  ಮೂಡುಬಿದಿರೆ: ನಾವು ಇಂದು ದೇಶ ಕಟ್ಟುವ ಮೊದಲು ದ್ವೇಷ ಬಿಡಬೇಕು. ದ್ವೇಷ ಬಿಡಬೇಕಾದರೆ ನಾವು ಸಮಾನತೆಯ, ಸಾಮರಸ್ಯದ ಮನಸ್ಥಿತಿ ಹೊಂದಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶುಕ್ರವಾರ ಮೂಡಬಿದಿರೆಯ ಪುತ್ತಿಗೆ ವಿವೇಕಾನಂದ ನಗರದಲ್ಲಿನ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ 24ನೇ ವರ್ಷದ ಆಳ್ವಾಸ್ ವಿರಾಸತ್ ನ ರಾಷ್ಟ್ರೀಯ ಸಾಂಸ್ಕ್ರತಿಕ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಗಾಲ್ಯಾಂಡ್ ರಾಜ್ಯಪಾಲರಾದ ಪಿ.ಬಿ.ಆಚಾರ್ಯ ಅವರು...
1 3,333 3,334 3,335 3,336 3,337 3,392
Page 3335 of 3392