ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸರಸ್ವತಿ ವಂದನಾ ಕಾರ್ಯಕ್ರಮ -ಕಹಳೆ ನ್ಯೂಸ್

ಪುತ್ತೂರು : ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸರಸ್ವತಿ ವಂದನಾ ಕಾರ್ಯಕ್ರಮ ವನ್ನು ಹಮ್ಮಿಕ್ಕೊಳ್ಳಲಾಗಿತ್ತು.
ಪುತ್ತೂರು ಜಿಲ್ಲಾ ಗ್ರಾಮಾಂತರ ಪ್ರಭಾರಿ ಗಳಾದ ರವೀಂದ್ರನಾಥ ರೈ ಬಳ್ಳಮಜಲು ಮತ್ತು ಮಧು ನರಿಯೂರು ಇದರಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಸಹ ಸಂಯೋಜಕರಾದ ಕೃಷ್ಣ ಕುಮಾರ್ ಅತ್ರೆಜಾಲು ಕಾರ್ಯ ಕ್ರಮ ಸಂಯೋಜಿಸಿದ್ದರು, ದೇವಸ್ಥಾನದ ಆಡಳಿತ ಸಮಿತಿ ಹಾಗೂ ಊರ ಗಣ್ಯರು ಸಹಕರಿಸಿದ್ದರು..
ದೇವಳದ ಅರ್ಚಕರು ಪೂಜಾ ವಿದೀವಿಧಾನಗಳನ್ನು ನೆರವೇರಿಸಿಕೊಟ್ಟರು.ಊರಿನ ವಿದ್ಯಾರ್ಥಿಗಳು ಮತ್ತು ಭಗವದ್ಭಕ್ತರಾದ ಬಂಧು ಭಗೀನೀಯರು ಹಾಗೂ ಮಕ್ಕಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.











