Recent Posts

Saturday, April 25, 2026

ಸುದ್ದಿ

ಸುದ್ದಿ

ಕಣ್ಣೂರಿನಲ್ಲಿ ಇಬ್ಬರು ಭಯೋತ್ಪದಕರ ಸೆರೆ | ಇಸ್ಲಾಮಿಕ್ ಸ್ಟೇಟ್ ಗೆ ಸೇರಿದ ಉಗ್ರರು.

ಕಣ್ಣೂರು: ಇಬ್ಬರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ತಲಶೇರಿ ಪೊಲೀಸರು ಬಂಧಿಸಿದ್ದಾರೆ. ತಲಶೇರಿ ನಿವಾಸಿಗಳಾದ ಹಂಸ(55), ಮನಾಫ್ (26) ಬಂಧಿತ ಆರೋಪಿಗಳು. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ತಲಶೇರಿ ಪೊಲೀಸರು ಬಂಧಿಸಿದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಸಂಖೈ 5ಕ್ಕೇರಿದರೆ. ಅಬ್ದುಲ್ ರಸಾಕ್, ಮಿಥಿಲಾಜ್, ರಶೀದ್ ಎಂಬಿವರನ್ನು ಬುಧವಾರ ಬಂಧಿಸಲಾಗಿತ್ತು. ಬಂಧಿತರಲ್ಲಿ ಹಂಸ ಕಣ್ಣೂರು, ಕಾಸರಗೋಡು ಜಿಲ್ಲೆಗಳಿಂದ ಹಲವರನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನೆಗೆ ಕಳುಹಿಸಿದ ಏಜಂಟ್ ಎಂದು ತಿಳಿದು ಬಂದಿದೆ. ಈಗ ಬಂಧಿತರಾದವರು...
ಸುದ್ದಿ

ಸ್ವಚ್ಛಮಂಗಳೂರು 4ನೇ ಹಂತದ ಸ್ವಚ್ಛತಾ ಅಭಿಯಾನಕ್ಕೆ ನವೆಂಬರ್ ನಲ್ಲಿ ಚಾಲನೆ | ಸ್ವಚ್ಛ ಭಾರತ ಯೋಜನೆ ಸಹಕಾರಕ್ಕೆ ರಾಮಕೃಷ್ಣ ಮಿಷನ್ ನಿಂದ ವಿನೂತನ ಕಾರ್ಯಕ್ರಮ.

ಮಂಗಳೂರು: ಪ್ರಧಾನಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನವನ್ನು ಕೇಂದ್ರ ಸರಕಾರದ ವಿಶೇಷ ವಿನಂತಿಯ ಮೇರೆಗೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಎಂಬ ಹೆಸರಿನಲ್ಲಿ “ಸ್ವಚ್ಛತೆಯೇ ದೇವರು” ಎಂಬ ನೆಲೆಗಟ್ಟಿನಲ್ಲಿ ಆಯೋಜಿಸಿಕೊಂಡು ಬರುತ್ತಲಿದೆ. ಕಳೆದ ಎರಡೂವರೆ ವರುಷಗಳಿಂದ ಮಂಗಳೂರಿನಲ್ಲಿ ಉತ್ತಮ ಜನಸ್ಪಂದನೆ ದೊರೆತಿದೆ. ಜನರಿಂದ ಜನರಿಗಾಗಿ ಜನರೇ ಮಾಡುವ ಕಾರ್ಯಕ್ರಮ ಎಂಬ ಭಾವಜಾಗೃತವಾದುದರ ಪರಿಣಾಮ ಇಂದು ಯಶಸ್ವಿಯಾಗಿ ನಾಲ್ಕನೇ ಹಂತಕ್ಕೆ ಮುನ್ನಡಿಯಿಡುತ್ತಿದೆ. ನಾಲ್ಕನೇ ಹಂತ ನವೆಂಬರ್ 3, 4...
ಸುದ್ದಿ

ಹತ್ತಿ ಉರಿಯಿತು ಐಶ್ವರ್ಯ ರೈ ತಾಯಿ ಮನೆ | ಸ್ಥಳಕ್ಕೆ ಧಾವಿಸಿದ ಐಶ್,ಅಭಿ.

ಮುಂಬಯಿ : ಐಶ್ವರ್ಯಾ ರೈ  ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ವಾಸವಾಗಿರುವ ಇಲ್ಲಿನ ಹದಿನಾರು ಅಂತಸ್ತುಗಳ ಲಾ ಮೇರ್‌ ಅಪಾರ್ಟ್‌ಮೆಂಟಿನ ಹದಿಮೂರನೇ ಮಹಡಿಯಲ್ಲಿ  ನಿನ್ನೆ ಮಂಗಳವಾರ ಬೆಂಕಿ ಕಾಣಿಸಿಕೊಂಡಿತು. ಪರಿಣಾಮವಾಗಿ ಐಶ್ವರ್ಯಾ ಮತ್ತು ಅಭಿಷೇಕ್‌ ಅವರು ಬಾಂದ್ರಾದಲ್ಲಿನ ಐಶ್ವರ್ಯಾ ಅವರ ತಾಯಿ ಮನೆಗೆ ಸ್ಥಳಾಂತರಗೊಂಡರು. ಐಶ್ವರ್ಯಾ - ಅಭಿಷೇಕ್‌ ವಾಸವಾಗಿರುವ 16 ಅಂತಸ್ತುಗಳ ಲಾ ಮೇರ್‌ ಅಪಾರ್ಟ್‌ಮೆಂಟಿನ 13ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕೂಡಲೇ ಅಗ್ನಿಶಾಮಕದಳದವರು ನಂದಿಸುವಲ್ಲಿ ಸಫ‌ಲರಾದರು. ಐಶ್ವರ್ಯಾ...
ಸುದ್ದಿ

ರಾಷ್ಟ್ರಪತಿ ಭಾಷಣದಲ್ಲಿಯೂ ರಾಜಕೀಯ ಮಾಡಿದ ರಾಜ್ಯ ಸರ್ಕಾರ | ಟಿಪ್ಪು ಹೆಸರು ಬಳಸಿಕೊಂಡ ಸಿದ್ದು ಸರ್ಕಾರ..?

ಬೆಂಗಳೂರು : ವಿಧಾನಸೌಧದ ವಜ್ರಮಹೋತ್ಸವದ ಭಾಷಣ ಕಾಂಗ್ರೆಸ್ ಸಂಭ್ರಮಕ್ಕೆ ಕಾರಣವಾದರೆ, ಬಿಜೆಪಿಯವರ ತೀವ್ರ ಮುಜುಗರಕ್ಕೆ ಕಾರಣವಾಯ್ತು. ಮೊದಲ ಬಾರಿಗೆ ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬ್ರಿಟಿಷರ ವಿರುದ್ಧ ಹೋರಾಡಿ ಟಿಪ್ಪು ಸುಲ್ತಾನ್ ವೀರ ಮರಣವನ್ನಪ್ಪಿದ ಎಂದು ರಾಷ್ಟ್ರಪತಿ ಭಾಷಣದಲ್ಲಿ ಉಲ್ಲೇಖಿಸಿದರು. ಭಾಷಣದಲ್ಲಿ ಟಿಪ್ಪುಸುಲ್ತಾನ್ ಬಗ್ಗೆ ಉಲ್ಲೇಖಿಸಿದ ರಾಷ್ಟ್ರಪತಿಗಳು, ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿಹೊಗಳಿದರು. ಇದಕ್ಕೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ, ಬಿಜೆಪಿ...
ಸುದ್ದಿ

ಜಲೀಲ್ ಕರೋಪಾಡಿ ಮರ್ಡರ್ ಆರೋಪಿಗಳು ಇಂದು ಮರಳಿ ಊರಿಗೆ |ಕಾದಿದೆಯೇ ಜೀವಭಯ?

ಮಂಗಳೂರು : ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ ಹೈಪ್ರೋಪೈಲ್ ಮರ್ಡರ್ ಕೇಸ್ ನಲ್ಲಿ ಅಂದರ್ ಆಗಿದ್ದ ಆರೋಪಿಗಳಿಗೆ ಹೈಕೋರ್ಟು ಈಗಾಗಲೇ ಶರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಈ ಆದೇಶದಂತೆ ಇಂದು ಆರೋಪಿಗಳು ಮೈಸೂರಿನ ಕಾರಾಗೃಹದಿಂದ ಹೊರಬರುತ್ತಿದ್ದಾರೆ. ಆದರೆ, ಸದ್ರಿ ಪ್ರಕರಣದ ಆರೋಪಿಗಳಿಗೆ ಜೀವಭಯ ಇದೆಯೇ ? ವ್ಯಾಪಾರದಿಂದ ಬದುಕು ಸಾಗಿಸುತ್ತಿದ್ದ ಇವರು ಇನ್ನು ಮುಂದೆ ಜನಸಾಮಾನ್ಯರ ಮಧ್ಯೆ ಬದುಕುವುದು ಕಷ್ಟವೇ? ಈ ಹಿಂದೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆದು, ಆರೋಪಿ...
ಸುದ್ದಿ

ರೋಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡಿ, ದೇಶವನ್ನು ಉಳಿಸಿರಿ | ಪ್ರೊ. ಭಗವಾನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿರಿ ! – ಪುತ್ತೂರಿನಲ್ಲಿ ಹಿಂದುತ್ವವಾದಿಗಳ ಬೇಡಿಕೆ.

ಪುತ್ತೂರು : ಭಾರತಕ್ಕೆ ನುಗ್ಗಿ ಬಂದಿರುವ ರೋಹಿಂಗ್ಯಾ ಮುಸಲ್ಮಾನರನ್ನು ತಕ್ಷಣ ದೇಶದಿಂದ ಹೊರಗೆ ಹಾಕಬೇಕು ಹಾಗೂ ಅವರು ಮತ್ತೆ ಭಾರತದೊಳಗೆ ಪ್ರವೇಶಿಸುವುದನ್ನು ತಡೆಯಬೇಕು, “ಶ್ರೀರಾಮ ದೇವರಲ್ಲ, ಕವಿ ವಾಲ್ಮೀಕಿಯೂ ಸಹ ಅವರನ್ನು ದೇವರೆಂದು ಹೇಳಿಲ್ಲ, ಶ್ರೀರಾಮ ಜಾತಿವಾದಿ” ಇತ್ಯಾದಿ ಹೇಳಿಕೆಯನ್ನು ಕೊಟ್ಟು ಪ್ರೊ.ಕೆ.ಎಸ್.ಭಗವಾನರು ಕೋಟಿ ಕೋಟಿ ಹಿಂದೂಗಳ ಭಾವನೆಯನ್ನು ನೋಯಿಸಿದ್ದಾರೆ. ಆದುದರಿಂದ ಪ್ರೊ. ಭಗವಾನರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸ್ಥಳೀಯ ಸಮವಿಚಾರಿ...
ಸುದ್ದಿ

ಟಿಪ್ಪು ಜಯಂತಿ ಮಾಡಲು ಅವಕಾಶ ಕೊಡಬೇಡಿ | ಜಾಗರಣಾ ವೇದಿಕೆ ಪುತ್ತೂರಿನಲ್ಲಿ ಮನವಿ.

ಪುತ್ತೂರು : ಹಿಂದೂ ವಿರೋಧಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ಅವಕಾಶ ನೀಡಬಾರದೆಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಇದರ ನೇತ್ರತ್ವದಲ್ಲಿ ರಾಜ್ಯಪಾಲರಿಗೆ ಮನವಿ ಮಾಡಲಾಯಿತು. ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ. ತಾಲೂಕು ಪಂಚಾಯತ್ ಸದಸ್ಯ ರಾಧಕ್ರಷ್ಣ ಭೋರ್ಕರ್,ಹೀರೆಭಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ, ನ್ಯಾಯವಾದಿ ರಾಘವೇಂದ್ರ ನಟ್ಟಿಬೈಲು,ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅಜಿತ್ ಹೋಸಮನೆ, ತಾಲೂಕು ಅಧ್ಯಕ್ಷ ಸಚಿನ್ ಪಾಪೆಮಜಲ್, ಸಂಚಾಲಕರಾದ ಚಿನ್ಮಯ್...
ಸುದ್ದಿ

ಚಿಕ್ಕಮುಡ್ನೂರಿನಲ್ಲಿ ಮೂಲಭೂತ ಸೌಕರ್ಯದ ಕೊರತೆ | ಅಶೋಕ್ ರೈವರಿಂದ ಸ್ಥಳಕ್ಕೆ ಭೇಟಿ ಮತ್ತು ಸಹಾಯ ಹಸ್ತ.

ಪುತ್ತೂರು : ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಗಡಿಕಲ್ಲು ನಿವಾಸಿ ಬೊಮ್ಮಿ ಎಂಬವರ ಮನೆಯು ಕುಸಿಯುವ ಹಂತದಲ್ಲಿದ್ದು ಮತ್ತು ಸಮರ್ಪಕ ಶೌಚಾಲಯದ ಕೊರತೆಯಿದ್ದು,ಅಂತೆಯೇ ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ನಿವಾಸಿ ಶಶಿರೇಖಾ ಎಂಬವರ ಮನೆಗೆ ಆರ್ಥಿಕ ಸಮಸ್ಯೆಯಿಂದ ವಿದ್ಯುತ್ ಸಂಪರ್ಕ ಸ್ಥಗಿತವಾಗಿರುವುದನ್ನು ಮನಗಂಡ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೊಮ್ಮಿ ಎಂಬವರ ಮನೆ ದುರಸ್ತಿ ಮತ್ತು ಶೌಚಾಲಯದ ದುರಸ್ತಿ...
1 3,313 3,314 3,315 3,316 3,317 3,336
Page 3315 of 3336