ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಸಲಾಂ: ಅನಿತಾ ಕಾಮತ್
ಪುತ್ತೂರು: ಕೊರೊನ ಸಮಯದಲ್ಲಿ ಸಂಚರಿಸುವುದಕ್ಕೆ ಕಷ್ಟದ ಪರಿಸ್ಥಿತಿ ಇದ್ದಾಗಲೂ ಕೆಲವು ಬಸ್ಸುಗಳ ಓಡಾಟಕ್ಕೆ ವ್ಯವಸ್ಥೆ ಮಾಡಿರುವುದು ಜನರಿಗೆ ಸಹಕಾರಿಯಾಗಿದೆ. ಕೆಲವು ಸಾರಿಗೆ ಸಿಬ್ಬಂದಿಗಳು ಮಾನವೀಯತೆ ಮೆರೆದು ತಮ್ಮ ಕೆಲಸ ನಿರ್ವಹಿಸುವವರ ಮಧ್ಯೆ ಮಾನವೀಯತೆ ಮರೆತವರು ಇದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಸಲಾಂ. ಬಸ್ಸು ಹಾಳಾದಾಗ ಕೆಲವು ಸಂಧರ್ಭದಲ್ಲಿ ಜಾಗರೂಕತೆಯಲ್ಲಿ ಪ್ರಯಾಣಿಕರನ್ನು ಮನೆ ತಲುಪಿಸುವ ಕೆಲಸ ಮಾಡುತ್ತಾರೆ. ಈ ಬಸ್ಸಿನ ಪ್ರಯಾಣದಲ್ಲಿ ಆಗುವ ಅನುಭವಗಳು ಅನೇಕ ಎಂದು ಇಲ್ಲಿನ...







