ನಲ್ಕೆ ಬಾಕಿಮಾರುನಲ್ಲಿ 18ರಂದು ಮಾರಿ ದೊಂಪದ ಬಲಿ ಉತ್ಸವ-ಕಹಳೆ ನ್ಯೂಸ್
ಬಂಟ್ವಾಳ : ಬಂಟ್ವಾಳ ಇಲ್ಲಿನ ರಾಯಿ ಸಮೀಪದ ಕೊಯಿಲ ಗ್ರಾಮ ಬೈದಗುತ್ತು ನಲ್ಕೆ ಬಾಕಿಮಾರು ಗದ್ದೆ ಎಂಬಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ದೈವ ಸಾನಿಧ್ಯದಲ್ಲಿ ಇದೇ 18ರಂದು ರಾತ್ರಿ ಗಂಟೆ 7ರಿಂದ ಧೂಮಾವತಿ ಮತ್ತು ಮೈಸಂದಾಯ ಸಹಿತ ಕೊಡಮಣಿತ್ತಾಯ ಒಡ್ಯಾಣೇಶ್ವರಿ ಪರಿವಾರ ದೈವಗಳಿಗೆ ಪ್ರಥಮ ವರ್ಷದ ಮಾರಿ 'ದೊಂಪದ ಬಲಿ ಉತ್ಸವ' ನಡೆಯಲಿದೆ. ಅಂದು ಬೆಳಿಗ್ಗೆ ಗಂಟೆ 10ರಿಂದ ನಡ್ವಂತಾಡಿ ಉದಯ ಪಾಂಗಣ್ಣಾಯ ತಂತ್ರಿ ಮತ್ತು ಅರಳ ಹರೀಶ ಭಟ್ ಮಾರ್ಗದರ್ಶನದಲ್ಲಿ...







