Saturday, May 9, 2026

ಪ್ರಾದೇಶಿಕ

ಪುತ್ತೂರು

ಪುತ್ತೂರು ಜಾತ್ರೆ, ಯುಗಾದಿ ಪ್ರಯುಕ್ತ ಸೆಲ್ ಝೋನ್‍ನಲ್ಲಿ ಮಹಾ ಎಕ್ಸ್ ಚೇಂಜ್ ಆಫರ್, ವಿಶೇಷ ಡಿಸ್ಕೌಂಟ್ ಸೇಲ್- ಕಹಳೆ ನ್ಯೂಸ್

ಪುತ್ತೂರು : ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ಬೇವು, ಬೆಲ್ಲದ ಜೊತೆಗೆ ಯುಗಾದಿ ಹಬ್ಬದ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ‘ಸದಾ ನಿಮ್ಮನ್ನು ಸಂಪರ್ಕದಲ್ಲಿರಿಸುವ ಸೆಲ್ ಝೋನ್ ಮಳಿಗೆ’. ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಕಾರ್ಪೋರೇಷನ್ ಬ್ಯಾಂಕ್ ಬಳಿ ಇರುವ ‘ಸೆಲ್‍ಝೋನ್ ಮೊಬೈಲ್ ಸರ್ವಿಸ್ & ಸರ್ವಿಸ್ ಮಳಿಗೆ’ ಯಾವುದೇ ಸ್ಥಿತಿಯಲ್ಲಿರುವ ನಿಮ್ಮ ಹಳೆಯ ಮೊಬೈಲ್‍ಗಳನ್ನು ಅತ್ಯಾಧುನಿಕ 5ಜಿ ಸ್ಮಾರ್ಟ್ ಫೋನಿನೊಂದಿಗೆ ಎಕ್ಸ್ ಚೇಂಜ್ ಮಾಡುವ ಅವಕಾಶವನ್ನು ನೀಡುತ್ತಿದೆ. ಜೊತೆಗೆ...
ಪುತ್ತೂರು

ಅಂಬಿಕಾ ಕ್ಯಾಂಪಸ್‍ನಲ್ಲಿ ಹೊಸವರ್ಷಾಚರಣೆ, ಭಾರತೀಯ ದಿನದರ್ಶಿಕೆ ಬಿಡುಗಡೆ , ಯುಗಾದಿ ಹಬ್ಬ ಭಾರತೀಯ ಪರಂಪರೆಯ ಹೊಸವರ್ಷ ; ಆದರ್ಶ ಗೋಖಲೆ-ಕಹಳೆ ನ್ಯೂಸ್

ಪುತ್ತೂರು : ಡಿಸೆಂಬರ್ 31ರ ರಾತ್ರಿ ಕಳೆದು ಜನವರಿ 1 ಬಂದಾಗ ದಿನ ಬದಲಾವಣೆಯಾಗುತ್ತದೆಯೇ ವಿನಃ ಪ್ರಾಕೃತಿಕ ಬದಲಾವಣೆಗಳಿಲ್ಲ. ಆದರೆ ಭಾರತೀಯ ಕಲ್ಪನೆಯ ಯುಗಾದಿಯಂದು ಪ್ರಕೃತಿಯೇ ತನ್ನಲ್ಲಿ ಬದಲಾವಣೆಗಳನ್ನು ತಂದು ಸಹಜವಾದ ಹೊಸತನ ದತ್ತ ಹೆಜ್ಜೆ ಇಡುತ್ತದೆ. ಆದ್ದರಿಂದಲೇ ಯುಗಾದಿ ನಿಜಾರ್ಥದಲ್ಲಿ ನೂತನ ವರ್ಷಾರಂಭ ಎಂಬ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು. ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ...
ಪುತ್ತೂರು

ಪುತ್ತೂರು ಜಾತ್ರೆಯಲ್ಲಿ ಶ್ರೀ ದೇವರ ಪೇಟೆ ಸವಾರಿಯಲ್ಲಿ ಶಾಸಕ ಸಂಜೀವ ಮಠಂದೂರು ಭಾಗಿ-ಕಹಳೆ ನ್ಯೂಸ್

ಪುತ್ತೂರು : ಎ.12 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಶ್ರೀ ದೇವರ ಸವಾರಿಯಲ್ಲಿ ಪಾಲ್ಗೊಂಡರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮುಳಿಯ ಕೇಶವಪ್ರಸಾದ್ ಹಾಗೂ ಇನ್ನಿತರ ಸದಸ್ಯರು ಮತ್ತು ಭಕ್ತರು ಜೊತೆಯಲ್ಲಿದ್ದರು....
ಪುತ್ತೂರು

ಪುತ್ತೂರು ಜಾತ್ರೆಯ ಎ.12 ರಂದು ಪೇಟೆ ಸವಾರಿಯಲ್ಲಿ 19 ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿದ ಮಹಾದೇವ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಕೋವಿಡ್ ನಿಯಾಮಾವಳಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದೇವಳ ಆರ್ಚಕರು, ಪರಿಚಾರಕರು, ಸ್ವಯಂ ಸೇವಕರು ಹಾಗೂ ಕಟ್ಟೆ ಪೂಜೆಯ ಭಕ್ತರನ್ನೊಳಗೊಂಡು ನಡೆಯುತ್ತಿದೆ. ಮತ್ತು ಎ.12 ರಂದು ಪೇಟೆ ಸವಾರಿಯಲ್ಲಿ ಶ್ರೀ ದೇವರು ಶಿವಪೇಟೆ ಪರ್ಲಡ್ಕ ತೆಂಕಿಲ ಸವಾರಿಯಲ್ಲಿ 19 ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿದರು....
ಬಂಟ್ವಾಳ

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ 37ನೇ ವರ್ಷಾಚರಣೆ ಪ್ರಯುಕ್ತ ಎ. 18ರಂದು ಉಚಿತ ಸಾಮೂಹಿಕ ವಿವಾಹ ನಿಶ್ಚಿತಾರ್ಥ-ಕಹಳೆ ನ್ಯೂಸ್

ಬಂಟ್ವಾಳ : ಇಲ್ಲಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ 37ನೇ ವರ್ಷಾಚರಣೆ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಎ.25ರಂದು ನಡೆಯಲಿರುವ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪ್ರಯುಕ್ತ ವಧು-ವರರ ನಿಶ್ಚಿತಾರ್ಥ ಕಾರ್ಯಕ್ರಮ ಇದೇ 18ರಂದು ಪುಂಜಾಲಕಟ್ಟೆ ಸುವಿಧಾ ಸಭಾಂಗಣದಲ್ಲಿ ನಡೆಯಲಿದೆ. ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ನೇತೃಥ್ವದಲ್ಲಿ ಈ ಬಾರಿ ಒಟ್ಟು 16 ಜೋಡಿಗೆ ವಿವಾಹ ನಡೆಯಲಿದ್ದು, ವಧು-ವರರಿಗೆ ಮಂಗಳವಸ್ತ್ರ ವಿತರಿಸಲಾಗುತ್ತದೆ ಎಂದು ಕ್ಲಬ್ಬಿನ...
ಬಂಟ್ವಾಳ

ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಬ್ಬರಬೈಲು ಎಂಬಲ್ಲಿ ಬೊಬ್ಬರ್ಯ ದೈವದ ನೇಮೋತ್ಸವ-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಬ್ಬರಬೈಲು ಎಂಬಲ್ಲಿ ಕಡಲ ತೀರದ ಜನರ ಆರಾಧ್ಯ ದೈವ ಬೊಬ್ಬರ್ಯ ನೇಮೋತ್ಸವ ಶನಿವಾರ ರಾತ್ರಿ ಸಂಭ್ರಮ ಸಡಗರದಿಂದ ನಡೆಯಿತು. ಆಡಳಿತ ಟ್ರಸ್ಟಿ ವಸಂತ ಕುಮಾರ್ ಅಣ್ಣಳಿಕೆ, ಹಷೇಂದ್ರ ಹೆಗ್ಡೆ ಸಹಿತ ಅಪಾರ ಮಂದಿ ಭಕ್ತರು ಪಾಲ್ಗೊಂಡರು....
ಬಂಟ್ವಾಳ

ಬಂಟ್ವಾಳ : ಭಾರೀ ಸಿಡಿಲು ಸಹಿತ ಗಾಳಿ ಮಳೆ, ಇಬ್ಬರಿಗೆ ಗಾಯ ; ಲಕ್ಷಾಂತರ ಮೌಲ್ಯದ ಹಾನಿ, ಮೆಸ್ಕಾಂ ಗೆ ಅಪಾರ ನಷ್ಟ-ಕಹಳೆ ನ್ಯೂಸ್

ಬಂಟ್ವಾಳ : ತಾಲೂಕಿನಾದ್ಯಂತ ಭಾನುವಾರ ರಾತ್ರಿ ಭಾರೀ ಗುಡುಗು ಮತ್ತು ಮಿಂಚು ಸಹಿತ ದಿಢೀರನೆ ಸುರಿದ ಗಾಳಿ ಮಳೆಗೆ ಇಲ್ಲಿನ ಹಲವು ಮನೆಗಳಿಗೆ ಹಾನಿಯಾಗಿ ಮೆಸ್ಕಾಂ ಇಲಾಖೆಗೂ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಕಾವಳಪಡೂರು ಗ್ರಾಮದ ಬರ್ಕಟ ನಿವಾಸಿ 29 ವರ್ಷದ ಗೀತಾ ಮತ್ತು ಅವರ ಪುತ್ರಿ 10 ವರ್ಷದ ರಶ್ಮಿತಾ ಸಿಡಿಲು ಬಡಿದು ಗಾಯಗೊಂಡು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಜಿಪ ಮುನ್ನೂರು ಗ್ರಾಮದ ಮಿತ್ತ ಕಟ್ಟ ನಿವಾಸಿ...
ಬೆಳ್ತಂಗಡಿ

ಮುಂಡಾಜೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾದ ಕೋಳಿಗಳನ್ನು ಹಿಡಿಯಲು ಮುಗಿಬಿದ್ದ ಜನ ; 50ಕ್ಕೂ ಅಧಿಕ ಕೋಳಿಗಳು ಸಾವು-ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 73 ರ ಪಕ್ಕದಲ್ಲಿ 150 ಕ್ಕೂ ಹೆಚ್ಚು ಸೇಲಂ ತಳಿ ಕೋಳಿಗಳನ್ನು ಎಸೆಯಲಾಗಿತ್ತು. ವಿಷಯ ತಿಳಿದು ಜನರು ಸ್ಥಳಕ್ಕೆ ಧಾವಿಸಿ ಸಾಧ್ಯವಾದಷ್ಟು ಕೋಳಿಗಳನ್ನು ಹಿಡಿದು ತೆಗೆದುಕೊಂಡು ಹೋಗಿದ್ದಾರೆ. ಆದರೆ ಇದೇ ವೇಳೆ 50 ಕ್ಕೂ ಹೆಚ್ಚು ಕೋಳಿಗಳು ಅನಾರೋಗ್ಯದಿಂದ ಬಳಲುತ್ತಿರುವುದು ಕಾಣಿಸಿಕೊಂಡಿದೆ. ಅಲ್ಲಿ ಸತ್ತ ಕೋಳಿಗಳು ಇದ್ದುದರಿಂದ ಜೀವಂತ ಕೋಳಿಗಳನ್ನು ತೆಗೆದುಕೊಂಡು ಹೋದವರು ಅದನ್ನು ತಿನ್ನಬಾರದು ಎಂದು...
1 762 763 764 765 766 875
Page 764 of 875