ಮಾನವೀಯತೆ ನಿರೂಪಿಸುವಲ್ಲಿ ಕಾರಂತರು ಯಶಸ್ವಿ: ಮೀನಾಕ್ಷಿ ರಾಮಚಂದ್ರ -ಕಹಳೆ ನ್ಯೂಸ್
ಮಂಗಳೂರು : ಹೆಣ್ಣಿಗೆ ಆಯ್ಕೆ ಸ್ವಾತಂತ್ರ್ಯ ಇರಲಿಲ್ಲ. ಸಮಾಜದಲ್ಲಿ ಕುರುಡಾಗಿ ಬದುಕುತ್ತಿದ್ದ ಹೆಣ್ಣಿನ ಅಂತರಾಳದಲ್ಲಿ ಏನಿತ್ತು ಎಂಬುದನ್ನು ಮಾನವೀಯ ಅಂತಃಕರಣ ಮೂಲಕ ಸಾಹಿತ್ಯದೊಳಗೆ ನಿರೂಪಿಸುವಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ ಎಂದು ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಮೀನಾಕ್ಷಿ ರಾಮಚಂದ್ರ ಅವರು ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಪೀಠ ಮತ್ತು ಕಾಲೇಜಿನ ಕನ್ನಡ ಸಂಘ...






