
ಪುತ್ತೂರು: ವಿವೇಕಾನಂದ ಕಾಲೇಜಿನಲ್ಲಿ ವಿಭಿನ್ನ ರೀತಿ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಕಾಲೇಜಿನ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯತು.

ಭಾರತೀಯ ಸಂಸ್ಕøತಿ, ಸಂಪ್ರದಾಯ, ಜಾನಪದ, ರಾಷ್ಟ್ರೀಯತೆ ಹೀಗೆ ಪಕ್ಕಾ ದೇಸಿಯ ಕಲಾ ವೈಭವವನ್ನೇ ವಿದ್ಯಾರ್ಥಿಗಳು ನೀಡಿ ವಾರ್ಷಿಕೋತ್ಸವದಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನೀಡುವ ಮೂಲಕ ಪ್ರಶಂಸೆಗೆ ಭಾಜಿನರಾದರು.
ಭರತನಾಟ್ಯ, ಕಥಕ್ನೃತ್ಯ, ಕೊಡವ ನೃತ್ಯ ಇಂತಹ ವಿಭಿನ್ನ ನೃತ್ಯಗಳ ಮೂಲಕ, ಹಾಗೂ ದಾಸರು ಸಮಾಜಕ್ಕೆ ಹೇಳಿದ ಸಂದೇಶ, ರಾಷ್ಟ್ರೀಯತೆಯನ್ನು ಮೆರೆಯುವ ‘ವಿ ಸಪೋರ್ಟ್ ಸಿಎಎ ಎಂಬ ನಾಟಕ, ‘ಬಯ್ಯದ ಪೋಡಿ’ ಪ್ರಹಸನ, ‘ಮಹಿಳಾ ಸಬಲೀಕರಣ’ ಕುರಿತಾದ ಕಾರ್ಯಕ್ರಮ ಹಾಗೂ ನರಕಾಸುರ ಮೋಕ್ಷ ಯಕ್ಷಗಾನ ನಡೆಯಿತು.









