
ಪುತ್ತೂರು : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ವ್ಯವಹಾರ ಆಡಳಿತ ಮತ್ತು ವೃತ್ತಿಪರ ಅಧ್ಯಯನ ವಿಭಾಗದ ಮ್ಯಾನೇಜ್ಮೆಂಟ್ ಅಸೋಸಿಯೇಷನ್ನ 2026–27ನೇ ಸಾಲಿನ ಚಟುವಟಿಕೆಗಳಿಗೆ ಎಸ್ಜೆಎಂ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಬಳಿಕ ‘ಸ್ಟಾರ್ಟ್ಅಪ್ಗಳು ಮತ್ತು ಉದ್ಯಮಗಳಲ್ಲಿ ಪ್ರತಿಭಾ ನಿರ್ವಹಣೆ’ ವಿಷಯದ ಕುರಿತು ಕಾರ್ಯಾಗಾರ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಅಸೋಸಿಯೇಷನ್ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಯಕತ್ವ ಗುಣ, ಉಪಕ್ರಮಶೀಲತೆ ಹಾಗೂ ಆಡಳಿತಾತ್ಮಕ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿ, ಮಾನವ ಸಂಪನ್ಮೂಲ ತಜ್ಞೆ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ವಚನಾ ಜಯರಾಮ್ ಕಾರ್ಯಾಗಾರ ನಡೆಸಿದರು. ಉದ್ಯಮಶೀಲ ವಾತಾವರಣದಲ್ಲಿ ಪರಿಣಾಮಕಾರಿ ಪ್ರತಿಭಾ ನಿರ್ವಹಣೆಯ ಮಹತ್ವವನ್ನು ವಿವರಿಸಿದ ಅವರು, ಉದ್ಯಮಗಳ ಅಭಿವೃದ್ಧಿ, ಕಾರ್ಯಾಚರಣೆಯ ವಿಸ್ತರಣೆ, ಸುಸ್ಥಿರ
ವ್ಯವಹಾರ ಮಾದರಿ ಹಾಗೂ ಪ್ರತಿಭಾ ನೇಮಕಾತಿ ಕುರಿತು ಮಾಹಿತಿ ನೀಡಿದರು. ಉದ್ಯೋಗಿಗಳ ಆಯ್ಕೆಯಲ್ಲಿ ಹೊಂದಾಣಿಕೆ, ಸಂಸ್ಥೆಯ ಸಂಸ್ಕೃತಿ ಮತ್ತು ಮೌಲ್ಯಗಳಿಗೆ ಮಹತ್ವ ನೀಡಬೇಕು ಎಂದರು. ನೇಮಕಾತಿ ತಂತ್ರ, ಉದ್ಯೋಗದಾತರ ಬ್ರ್ಯಾಂಡಿಂಗ್, ಪ್ರತಿಭೆ ಉಳಿಸಿಕೊಳ್ಳುವಿಕೆ ಹಾಗೂ ಸ್ಟಾರ್ಟ್ಅಪ್ಗಳ ಬೆಳವಣಿಗೆ ನಿರ್ವಹಣೆ ಕುರಿತು
ಪ್ರಾಯೋಗಿಕ ಒಳನೋಟ ನೀಡಿದರು.
ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ವಿ. ಸ್ವಾಗತಿಸಿ, ಉದ್ಯಮ ಕ್ಷೇತ್ರದ ಪ್ರಾಯೋಗಿಕ ಅನುಭವದೊಂದಿಗೆ ವೃತ್ತಿಪರ ನಿರ್ವಹಣಾ ಶಿಕ್ಷಣ ಒದಗಿಸುವ ವಿಭಾಗದ ಬದ್ಧತೆಯನ್ನು ವಿವರಿಸಿದರು. ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಪ್ರಕೃತ್ ಜಿ.ಕೆ. ವಂದಿಸಿ ಮೊನಿಷಾ ಎಸ್. ನಿರೂಪಿಸಿದರು.











