Monday, April 27, 2026

archivePrivate Collage

ಸುದ್ದಿ

ಬೈಕ್ ಡಿಕ್ಕಿ: ಮೂವರು ವಿದ್ಯಾರ್ಥಿಗಳು ಗಂಭೀರ ಗಾಯ – ಕಹಳೆ ನ್ಯೂಸ್

ಮಂಗಳೂರು: ಮಂಗಳಾದೇವಿ ಜಂಕ್ಷನ್ ಗೆ ಬರುತ್ತಿದ್ದ ವೇಳೆ ಎರಡು ಬೈಕ್ ಗಳ ಮಧ್ಯೆ ನಡೆದ ಡಿಕ್ಕಿಯಲ್ಲಿ ಮೂರು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆಯು ಗುರುವಾರ ತಡರಾತ್ರಿ ಮಂಗಳಾದೇವಿ ಸಮೀಪ ನಡೆದಿದೆ. ಗಾಯಾಳುಗಳನ್ನು ಕಾಸರಗೋಡಿನ ರಾಮಕೃಷ್ಣನ್(25), ಪ್ರಥ್ವಿ(19) ಮತ್ತು ಶ್ರೇಷ್ಠ(19) ಎಂದು ಗುರುತಿಸಲಾಗಿದೆ. ಇವರು ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಪ್ರಥ್ವಿ ಹಾಗೂ ಶ್ರೇಷ್ಠ ಎಂಬವರು ಮಂಗಳಾದೇವಿ ಜಂಕ್ಷನ್ ಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ರಾಮಕೃಷ್ಣನ್...