ಬಲ್ಯದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿಯಲ್ಲಿ ಲಂಡನ್ನಿನ ಇಸ್ಕಾನ್ ದೇವಾಲಯದ ಅರ್ಚಕರಾದ ಜೋಕಾನವಿಕ್ ವಾಯುದಾಸ್ – ಕಹಳೆ ನ್ಯೂಸ್
ಬಲ್ಯ : ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿಯ ದಿನ ವಿಶೇಷ ಕಾರ್ಯಕ್ರಮ ನಡೆಯಿತು. ಆಲಂಕಾರಿನ ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ಮನೆ ಮನೆ ಭಗವದ್ಗೀತೆ ಅಭಿಯಾನ ಹಾಗೂ ಗೀತಾ ಸಾರೋದ್ಧಾರ-೧೮ ಪ್ರವಚನ ಮಾಲಿಕೆಯ ಕಾರ್ಯಕ್ರಮ ನಡೆಯಿತು. ಸುಧನ್ವಾ ಕೂಡೂರು ಮತ್ತು ದೇವಕಿ ಕೂಡೂರು ಅವರು ಶ್ರೀಮದ್ಭಗವದ್ಗೀತೆಯ ಹತ್ತನೆಯ ಅಧ್ಯಾಯದ ವಾಚನ ನಡೆಸಿದರು. ಸ್ಥಳೀಯ ಶ್ರೀಪೂರ್ಣ ಆಯುರ್ವೇದ ಚಿಕಿತ್ಸಾಲಯದಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಲಂಡನ್ನಿನ ಇಸ್ಕಾನ್...







