ಜಯನಗರದ ಬಿಜೆಪಿ ಅಭ್ಯರ್ಥಿಗಾಗಿ ಯುವಕರ ಹುಡುಕಾಟದಲ್ಲಿ ಹೈಕಮಾಂಡ್! ವಿಜಯಕುಮಾರ್ ಸ್ಥಾನ ತುಂಬಿಸಬಲ್ಲ ಸಮರ್ಥರು ಯಾರು? – ಕಹಳೆ ನ್ಯೂಸ್
ಜಯನಗರ : ಜನಪ್ರಿಯ ನಾಯಕ ವಿಜಯ್ ಕುಮಾರ್ ಅವರ ಸಾವಿನಿಂದಾಗಿ ನಿಂತಿದ್ದ ಜಯನರಗದಲ್ಲಿ ಮತ್ತೆ ಮರುಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಕಮಾಂಡ್ ತೊಡಗಿದೆ. ಯುವನಾಯಕರಿಗೆ ಆದ್ಯತೆ ಕೊಡಬೇಕು ಎಂಬ ಕೂಗು ಕ್ಷೇತ್ರದ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದ್ದು, ಯುವನಾಯನ ಹುಡುಕಾಟದಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ವಿಜಯಕುಮಾರ್ ಅವರು ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, ಅವರನ್ನು ಸ್ಥಾನವನ್ನು ತುಂಬುವ ಸಾಮರ್ಥ್ಯ ಹೊಂದಿದ ನಾಯಕನ ಅವಶ್ಯಕತೆ ಬಿಜೆಪಿಗೆ ಇದೆ. ಈ ನಿಟ್ಟಿನಲ್ಲಿ...







