Recent Posts

Saturday, May 9, 2026

ರಾಜಕೀಯ

ರಾಜಕೀಯ

ರಾಜ್ಯ ಸರ್ಕಾರ ದತ್ತಪೀಠ ವಿವಾದವನ್ನು ರಾಜಕೀಯಗೊಳಿಸದೆ ವಾಸ್ತವ ನೆಲೆಯಲ್ಲಿ ಪರಿಹರಿಸಲಿ ; ದತ್ತಪೀಠದಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ – ಕಹಳೆ ನ್ಯೂಸ್

ಚಿಕ್ಕಮಗಳೂರು: ರಾಜ್ಯ ಸರ್ಕಾರ ದತ್ತಪೀಠ ವಿವಾದವನ್ನು ರಾಜಕೀಯಗೊಳಿಸದೆ ವಾಸ್ತವ ನೆಲೆಯಲ್ಲಿ ಪರಿಹರಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮನವಿ ಮಾಡಿದರು. ದತ್ತಮಾಲಾ ಅಭಿಯಾನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಧಾರ್ವಿುಕ ಸಭೆಯಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷದ ಹಿಂದೆ ದೇಶದ ಹಿಂದು ದೇವಾಲಯಗಳ ಮೇಲೆ ಮುಸ್ಲಿಂ ರಾಜರು ದಾಳಿ ಮಾಡಿ ಮಸೀದಿ ಕಟ್ಟಿದ್ದಾರೆ. ಇದರಲ್ಲಿ ದತ್ತಪೀಠವೂ ಒಂದು. ದತ್ತಾತ್ರೇಯ ಗುರು ತಪಸ್ಸು ಮಾಡಿದ ಜಾಗ ಬಾಬಾಬುಡನ್ ಅತಿಕ್ರಮಣವಾಗಿದೆ. ಇದು...
ರಾಜಕೀಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಧ್ಯವಿದ್ದರೆ ಮತ್ತೆ 370, 35ಎ ವಿಧಿ ಜಾರಿಗೊಳಿಸಿ ; ಮಹಾರಾಷ್ಟ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು – ಕಹಳೆ ನ್ಯೂಸ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ರದ್ದುಗೊಳಿಸಿರುವ 370 ಮತ್ತು 35ಎ ವಿಧಿಗಳನ್ನು ಸಾಧ್ಯವಿದ್ದರೆ ಮರುಜಾರಿಗೊಳಿಸುವಂತೆ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನಿಮಿತ್ತ ಜಲಗಾಂವ್​ನಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳುವಂತೆ ಮಾಡಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಇನ್ನೂ ನಾಲ್ಕು ತಿಂಗಳಾದರೂ ಬೇಕಾಗುತ್ತದೆ...
ರಾಜಕೀಯ

ಶಾಸಕರ ಭವನದ ಬಳಿಯಿರುವ ವಾಲ್ಮೀಕಿ ಪ್ರತಿಮೆ ಬಳಿ ಮಾಧ್ಯಮದವರಿಗೆ ನಿರ್ಬಂಧ ; ಸಿಎಂ ಕಾರ್ಯಕ್ರಮ ಪ್ರಸಾರ ಮಾಡದಿರಲು ನಿರ್ಧಾರ – ಕಹಳೆ ನ್ಯೂಸ್‍

ಬೆಂಗಳೂರು: ಶಾಸಕರ ಭವನದ ಬಳಿಯಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಿಎಂ ಯಡಿಯೂರಪ್ಪ ಅವರ ಕಾರ್ಯಕ್ರಮವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಿರಲು ಭಾನುವಾರ ಮಾಧ್ಯಮ ಪ್ರತಿನಿಧಿಗಳು ನಿರ್ಧರಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರು ವಾಲ್ಮೀಕಿ ಪ್ರತಿಮೆ ಬಳಿ ಬರುವ ಮೊದಲು ಮಾಧ್ಯಮದವರು ಅಲ್ಲಿಗೆ ತೆರಳಿದ್ದರು. ಆದರೆ ಪೊಲೀಸರು ವಾಲ್ಮೀಕಿ ಪ್ರತಿಮೆ ಬಳಿಗೆ ಹೋಗದಂತೆ ಮಾಧ್ಯಮದವರನ್ನು ತಡೆದರು. ಸಿಎಂ ಬರುವವರೆಗೆ ಯಾರನ್ನೂ ಒಳಗೆ ಬಿಡದಂತೆ ಡಿಸಿಪಿ ರಮೇಶ್ ಆದೇಶ ನೀಡಿದ್ದಾರೆ ಎಂದು ಸಬೂಬು ನೀಡಿದ್ದರು. ಇದರಿಂದ...
ರಾಜಕೀಯ

ಬೀಚ್ ಕ್ಲೀನಿಂಗ್ ವೇಳೆ ಮೋದಿ ಕೈಯಲ್ಲಿದಿದ್ದೇನು? ಕೊನೆಗೂ ಉತ್ತರಿಸಿದ ಪ್ರಧಾನಿ – ಕಹಳೆ ನ್ಯೂಸ್‍

ಚೆನ್ನೈ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ವೇಳೆ ಮಮ್ಮಲಾಪುರಂ ಬೀಚ್ ನಲ್ಲಿ ವಾಕಿಂಗ್ ಮಾಡಿದ್ದ ಪ್ರಧಾನಿ ಮೋದಿ ಬೀಚ್ ಕ್ಲೀನಿಂಗ್ ನಲ್ಲಿ ತೊಡಗಿದ್ದರು. ಆದರೆ ಮೋದಿ ಬೀಚ್ ಕ್ಲೀನಿಂಗ್ ಗಿಂತ ಅವರ ಕೈಯಲ್ಲಿದ್ದ ವಸ್ತುವೊಂದು ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ವಸ್ತು ಏನು ಎಂದು ಇದೀಗ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ. https://twitter.com/narendramodi/status/1183219001998172160     ನಿನ್ನೆ ತಮಿಳುನಾಡಿನ ಮಹಾಬಲಿಪುರಂನ ಬೀಚ್ ನಲ್ಲಿ ಬೆಳ್ಳಂಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ...
ರಾಜಕೀಯ

ಉಪಚುನಾವಣೆಯಲ್ಲಿ ಎಲ್ಲಾ 15 ಸ್ಥಾನಗಳನ್ನು ಬಿಜೆಪಿ ಭಾರಿ ಅಂತರದಿಂದ ಗೆಲ್ಲಲಿದೆ ; ಮುಂದಿನ ಮೂರು ವರ್ಷಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಎದುರಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಸುಳ್ಯದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್‍

ಸುಳ್ಯ, ಅ 13 : "ಉಪಚುನಾವಣೆಯಲ್ಲಿ ಎಲ್ಲಾ 15 ಸ್ಥಾನಗಳನ್ನು ಬಿಜೆಪಿ ಭಾರಿ ಅಂತರದಿಂದ ಗೆಲ್ಲಲಿದೆ. ಆದ್ದರಿಂದ ಮುಂದಿನ ಮೂರು ವರ್ಷಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಎದುರಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸುಳ್ಯಕ್ಕೆ ಆಗಮಿಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಾಮಾನ್ಯ ಕಾರ್ಯಕರ್ತನಿಗೂ ರಾಜ್ಯಾಧ್ಯಕ್ಷನಾಗುವ ಅರ್ಹತೆ, ಅವಕಾಶ ಬಿಜೆಪಿಯಲ್ಲಿ...
ರಾಜಕೀಯ

ಭಾರತದಲ್ಲಿ ಹಿಂದೂಗಳ ಕಾರಣದಿಂದ ಮುಸ್ಲಿಮರು ಸಂತೋಷದಿಂದಿದ್ದಾರೆ : ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ – ಕಹಳೆ ನ್ಯೂಸ್‍

ಹೊಸದಿಲ್ಲಿ: ಈ ಜಗತ್ತಿನ ಮುಸ್ಲಿಮರು ಅತ್ಯಂತ ಸಂತೋಷದಿಂದ ಇರುವುದು ಭಾರತದಲ್ಲಿ. ಅದು ಕೂಡಾ ಹಿಂದೂಗಳ ಕಾರಣದಿಂದ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಒರಿಸ್ಸಾದಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ್ ನಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದೂ ಕೇವಲ ಒಂದು ಧರ್ಮವಲ್ಲ. ಒಂದು ಭಾಷೆಯಲ್ಲ, ಅಥವಾ ಈ ದೇಶದ ಹೆಸರಲ್ಲ. ಬದಲಾಗಿ ಭಾರತದಲ್ಲಿ ವಾಸಿಸುವ ಎಲ್ಲರ ಸಂಸ್ಕೃತಿ. ಮತ್ತು ಎಲ್ಲಾ ಧರ್ಮವನ್ನು ಇದು ಗೌರವಿಸುತ್ತದೆ...
ರಾಜಕೀಯ

 ಐತಿಹಾಸಿಕ ನಗರಿ ಮಹಾಬಲಿಪುರಂನ ಬೀಚ್ ನಲ್ಲಿ ಬರಿಗಾಲಿನಲ್ಲೇ ಪ್ಲಾಸ್ಟಿಕ್ ಕವರ್, ಬಾಟಲಿ ಹೆಕ್ಕಿದ ಪ್ರಧಾನಿ ‘ಮೋದಿ’ – ವಿಡಿಯೋ ವೈರಲ್

ಮಹಾಬಲಿಪುರಂ, ಅ 12 : ಐತಿಹಾಸಿಕ ನಗರಿ ಮಹಾಬಲಿಪುರಂನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಹತ್ವದ ಭೇಟಿ ಶುಕ್ರವಾರ ತಮಿಳುನಾಡಿನ ಮಹಾಬಲಿಪುರಂ ಸಾಕ್ಷಿಯಾಯಿತು. ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಪು ಧೋತಿ, ಬಿಳಿ ಅಂಗಿ ಧರಿಸಿ ಶಲ್ಯ ಹೊದ್ದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಚೀನಾ ಅಧ್ಯಕ್ಷರನ್ನು ಬರಮಾಡಿಕೊಂಡ ಬಳಿಕ ಮಹಾಬಲಿಪುರಂ ದೇವಾಲಯಗಳ ಶಿಲ್ಪಕಲಾ ವೈಭವವನ್ನು ದರ್ಶನ ಮಾಡಿಸಿದ್ದರು. ಇದರ ಬೆನ್ನಲ್ಲೇ ಮೋದಿ ಅವರ ಸರಳತೆ...
ರಾಜಕೀಯ

ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಆದ ಹಿನ್ನೆಲೆ ; ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆಗೆ ಶರಣು – ಕಹಳೆ ನ್ಯೂಸ್

ಬೆಂಗಳೂರು: ಐಟಿ ವಿಚಾರಣೆ ಎದುರಿಸುವುದಕ್ಕೆ ಆಗಲ್ಲ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಮಾಜಿ ಡಿಸಿಎಂ ಪರಮೇಶ್ವರ್ ಅವರ ಪಿಎ ರಮೇಶ್ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮೇಶ್ 6 ವರ್ಷದಿಂದ ಪರಮೇಶ್ವರ್ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಆದ ಹಿನ್ನೆಲೆಯಲ್ಲಿ ರಮೇಶ್ ಮನೆ ಮೇಲೂ ದಾಳಿ ನಡೆದಿತ್ತು. ಆದರೆ ಮನೆಯಲ್ಲಿ ಯಾವುದೇ ದಾಖಲೆ ಸಿಕ್ಕಿರಲಿಲ್ಲ. ಪರಮೇಶ್ವರ್ ಪತ್ರ ವ್ಯವಹಾರದ...
1 131 132 133 134 135 232
Page 133 of 232