ಸುಡು ಬೇಸಿಗೆ ತಾಪಮಾನ ತಪ್ಪಿಸಿಕೊಳ್ಳಲು ವೈದ್ಯರೊಬ್ಬರ ಸಖತ್ ಉಪಾಯ ; ಕಾರಿಗೆ ಹಸುವಿನ ಸಗಣಿ ಲೇಪಿಸಿ ಬಿಸಿಲಿನ ಬೇಗೆಯಿಂದ ಮುಕ್ತಿ – ಕಹಳೆ ನ್ಯೂಸ್
ಮಧ್ಯಪ್ರದೇಶ: ಸಾಮಾನ್ಯವಾಗಿ ಈ ಆಧುನಿಕ ಯುಗದಲ್ಲಿ ಶಾಖವನ್ನು ತೊಡೆದುಹಾಕಲು ಜನರು ತಮ್ಮ ಕಾರುಗಳಲ್ಲಿ ಎಸಿ ಬಳಸುತ್ತಾರೆ. ತೀವ್ರ ಸೆಕೆಯಿಂದ ತಪ್ಪಿಸಿಕೊಳ್ಳಲು ವೈದ್ಯರೊಬ್ಬರು ಮಾಡಿರುವ ಉಪಾಯ ಸಖತ್ ಸುದ್ದಿಯಲ್ಲಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹೋಮಿಯೋಪತಿ ವೈದ್ಯರೊಬ್ಬರು ತಮ್ಮ ಕಾರಿಗೆ ಹಸುವಿನ ಸಗಣಿ ಪದರವನ್ನು ಲೇಪಿಸಿಕೊಂಡು ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆದಿದ್ದಾರೆ. ಹೀಗೆ ಮಾಡುವುದರಿಂದ ಕಾರಿನಲ್ಲಿ ತಂಪು ಉಳಿಯುತ್ತದೆ ಎಂದು ತಿಲಕಗಂಜ್ ವಾರ್ಡ್ನ ನಿವಾಸಿ ಹೋಮಿಯೋಪತಿ ವೈದ್ಯ ಸುಶೀಲ್ ಸಾಗರ್ ನಂಬಿದ್ದಾರೆ. ಹಸುವಿನ...







