ಪುತ್ತೂರಿನ ಶ್ರೀ ಸಾಯಿಕಲಾ ಯಕ್ಷಗಾನ ಬಳಗ ಡಾ.ಶಿವರಾಮ ಕಾರಂತ ಬಾಲವನ ಇದರ ಸದಸ್ಯೆ ಶ್ರೀಮತಿ ಜ್ಯೋತಿ ಅಶೋಕ್ ಅವರಿಗೆ ಒಲಿದ ತಾಲೂಕು ಮಟ್ಟದ ವಾಲ್ಮೀಕಿ ಪ್ರಶಸ್ತಿ – ಕಹಳೆ ನ್ಯೂಸ್
ಪುತ್ತೂರು: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಪ್ರಯುಕ್ತ ಇಂದು ಬಂಟ್ವಾಳ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಾಧಕರಿಗೆ ಸನ್ಮಾನ. "ತಾಲೂಕು ಮಟ್ಟದ ವಾಲ್ಮೀಕಿ ಪ್ರಶಸ್ತಿ" ಪ್ರಧಾನ ಕಾರ್ಯಕ್ರಮವು ತಾಲೂಕು ಪಂಚಾಯತ್ ಬಂಟ್ವಾಳ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ಸಾಯಿಕಲಾ ಯಕ್ಷಗಾನ ಬಳಗ ಡಾ.ಶಿವರಾಮ ಕಾರಂತ ಬಾಲವನ ಇದರ ಸದಸ್ಯೆಯಾಗಿರುವ ಶ್ರೀಮತಿ ಜ್ಯೋತಿ ಅಶೋಕ್ ಇವರಿಗೆ ತಾಲೂಕು ಮಟ್ಟದ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು....







