ಕಲ್ಲಿಕೋಟೆಯ ಕಲೋತ್ಸವದಲ್ಲಿ ಯಕ್ಷಗಾನಕ್ಕೆ ಅವಮಾನ : ಚೌಕಿ ಪೂಜೆ ಸಂದರ್ಭದಲ್ಲಿ ಗಣಪತಿ ವಿಗ್ರಹದ ಮುಂದೆ ಹಚ್ಚಿದ್ದ ದೀಪವನ್ನು ಬಲವಂತವಾಗಿ ನಂದಿಸಿದ ಸಂಘಟಕರು – ಕಹಳೆ ನ್ಯೂಸ್
ಕುಂಬಳೆ: ಕಲ್ಲಿಕೋಟೆಯಲ್ಲಿನ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಸಂದರ್ಭ ಯಕ್ಷಗಾನ ಕಲೆಯನ್ನು ಸಂಘಟಕರೇ ಅವಮಾನಿಸಿದ ಘಟನೆ ಗುರುವಾರ ನಡೆದಿದೆ. ಪ್ರದರ್ಶನ ಪೂರ್ವದಲ್ಲಿ ನಡೆಯುವ ಚೌಕಿ ಪೂಜೆ ಸಂದರ್ಭ ನುಗ್ಗಿ ಬಂದ ಸಂಘಟಕರು ಗಣಪತಿ ವಿಗ್ರಹದ ಮುಂದೆ ಹಚ್ಚಿದ್ದ ದೀಪವನ್ನು ಬಲವಂತವಾಗಿ ನಂದಿಸಿದರು. ಈ ಸಂದರ್ಭ ಮಾಧ್ಯಮದವರನ್ನು ತಡೆಹಿಡಿದಿದ್ದರಿಂದ ಕೃತ್ಯದ ಚಿತ್ರೀಕರಣಕ್ಕೆ ಅವಕಾಶವಾಗಿರಲಿಲ್ಲ.ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು. ಕೊನೆಗೆ ಪೊಲೀಸರು ಕಲಾವಿದರ ಮನವೊಲಿಸಿ ವೇದಿಕೆಯಲ್ಲಿ ಪ್ರದರ್ಶನ ನೀಡುವಂತೆ ಮಾಡಿದರು. ದೇವರು...







