ರೇಡಿಯೋ ಪಾಂಚಜನ್ಯದಲ್ಲಿ ಭಕ್ತಿಗೀತೆ – ಕವನವಾಚನ ಸ್ಪರ್ಧೆ: ಬಹುಮಾನ – ಕಹಳೆ ನ್ಯೂಸ್
ಪುತ್ತೂರು: ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ನೇತೃತ್ವದಲ್ಲಿ ಇನ್ನರ್ವೀಲ್ ಸಹಯೋಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆ ಮತ್ತು ಸ್ವರಚಿತ ಕವನವಾಚನ ಸ್ಪರ್ಧೆ ಜು. 15ರಂದು ನೆಹರೂನಗರ ವಿವೇಕಾನಂದ ಪಿ.ಜಿ. ಸೆಮಿನಾರ್ ಹಾಲ್ ನಡೆಯಿತು. ಕುಶಲ ಹಾಸ್ಯಪ್ರಿಯರ ಸಂಘದ ಅಧ್ಯಕ್ಷೆ ಶಂಕರಿ ಶರ್ಮ ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಅಧ್ಯಕ್ಷೆ ಟೈನಿ ದೀಪಕ್ ಅವರು ಉಪಸ್ಥಿತರಿದ್ದರು. ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು....







