ಶಿರಾಡಿಘಾಟ್ ನಲ್ಲಿ ಗುಡ್ಡ ಕುಸಿತ : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ : ಮಾಣಿಯಲ್ಲಿ ಬ್ಯಾರಿಕೇಟ್ ಅಳವಡಿಸಿ, ಬದಲಿ ಮಾರ್ಗದ ಸೂಚನೆ – ಕಹಳೆ ನ್ಯೂಸ್
ಕಳೆದೆರಡು ವಾರಗಳಿಂದ ರಾಜ್ಯದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದ, ಪ್ರಾಕೃತಿಕ ವಿಕೋಪಕ್ಕೆ ಅಲ್ಲಲ್ಲಿ ವಿಕೋಪಗಳು ಆನಾಹುತಗಳು ಸಂಭವಿಸುತ್ತಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ಪ್ರತಾಪ ಹೆಚ್ಚಾಗಿದ್ದು ಆನಾಹುತಗಳ ಸರಮಾಲೆಯೇ ಇಲ್ಲಿ ಘಟಿಸುತ್ತಿದೆ. ಗುಡ್ಡ ಕುಸಿತ, ಭೂ ಕುಸಿತ, ನೆರೆ, ವಿದ್ಯುತ್ ಕಂಬ ಧರೆಗುರುಳುವುದು, ಮರಗಳು ಉರುಳುವುದು ಸದ್ಯ ಇಲ್ಲಿ ಸರ್ವೆ ಸಾಮಾನ್ಯ ಸಂಗತಿಯಾಗಿದೆ. ಮಂಗಳೂರು ಮೈಸೂರನ್ನು ಸಂಪರ್ಕಿಸುವ ಮಾಣಿ – ಮೈಸೂರು ಹೆದ್ದಾರಿಯ ಕೊಡಗು ಜಿಲ್ಲೆಯ ಜೋಡುಪಾಲ ಎಂಬಲ್ಲಿ ರಸ್ತೆಗೆ ಗುಡ್ಡ...







