ಶ್ರೀ ಸ್ವಾಮಿ ಕೊರಗಜ್ಜ ಕಲಾಕೇಂದ್ರ ಕಲ್ಲುರ್ಟಿಯಡ್ಕ-ಉಕ್ಕುಡ ಇದರ ಆಶ್ರಯದಲ್ಲಿ ಸಂಗಮ ಯುವಕ ಮಂಡಲ ಪಡಿಬಾಗಿಲಿನಲ್ಲಿ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನೆ – ಕಹಳೆ ನ್ಯೂಸ್
ವಿಟ್ಲ : ಶ್ರೀ ಸ್ವಾಮಿ ಕೊರಗಜ್ಜ ಕಲಾಕೇಂದ್ರ ಕಲ್ಲುರ್ಟಿಯಡ್ಕ-ಉಕ್ಕುಡ ಇದರ ಆಶ್ರಯದಲ್ಲಿ ಸಂಗಮ ಯುವಕ ಮಂಡಲ ಪಡಿಬಾಗಿಲು ಇಲ್ಲಿನ ಕಟ್ಟಡದಲ್ಲಿ ಇಂದುಶ್ರೀ ಆ.ಓ.ಏ ಕಲ್ಲುರ್ಟಿಯಡ್ಕ ಇವರ ಸಂಯೋಜಕತ್ವದಲ್ಲಿ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉಕ್ಕುಡದ ಪುರಂದರದಾಸರೆAದೇ ಕರೆಯಲ್ಪಡುವ ಪ್ರಸಿದ್ಧ ಹಿರಿಯ ಭಜನೆಗಾರರಾದ ಶ್ರೀ ನಾರಾಯಣ ಶೆಟ್ಟಿಯವರ ದಿವ್ಯಹಸ್ತದಿಂದ ದೀಪ ಪ್ರಜ್ವಲನೆ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಐತ್ತಪ್ಪನಾಯ್ಕ...