Sunday, June 21, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕಾಡುಹಂದಿ ಕೊಲ್ಲಲು ಸರಪಂಚರಿಗೆ ಅಧಿಕಾರ; ಆಕ್ಷೇಪ ವ್ಯಕ್ತಪಡಿಸಿದ ಪ್ರಾಣಿ ಪ್ರಿಯರು -ಕಹಳೆ ನ್ಯೂಸ್

ಹೈದರಬಾದ್ : ಕೃಷಿ ನಾಶಮಾಡುವ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲುವ ಅಧಿಕಾರವನ್ನು ಗ್ರಾಮ ಮುಖ್ಯಸ್ಥ ಅಥವಾ ಸರಪಂಚರಿಗೆ ನೀಡಿದ್ದು, ಕಾಡುಹಂದಿಗಳನ್ನು ಕೊಂದು ಬೆಳೆ ಸಂರಕ್ಷಿಸಬಹುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಇದಕ್ಕೆ ಪ್ರಾಣಿ ಪ್ರಿಯರು ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರ ಈ ಅಧಿಸೂಚನೆಯನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಕಾಡು ಹಂದಿ ಉಪಟಳ ಹೆಚ್ಚಾಗಿರುವ ಕಾರಣ ಈ ಅಧಿಸೂಚನೆ ಜಾರಿಗೊಳಿಸಲಾಗಿದೆ ಎಂದು ಹೇಳಿದೆ....
ಹೆಚ್ಚಿನ ಸುದ್ದಿ

ಕಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ 2020-21ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆ-ಕಹಳೆ ನ್ಯೂಸ್

ಕಲ್ಲಡ್ಕ : 2020-21ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆ(NMMS) ದಿನಾಂಕ 25.01.2021 ರಂದು ಕಲಡ್ಕ ಶ್ರೀರಾಮ ಪ್ರೌಢಶಾಲೆ ಕೇಂದ್ರದಲ್ಲಿ ಜರಗಿತು. ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳ 8ನೇ ತರಗತಿಯಲ್ಲಿ ಕಲಿಯುತ್ತಿರುವ 215 ವಿದ್ಯಾರ್ಥಿಗಳು ಈ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಬೌದ್ಧಿಕ್ ಪರೀಕ್ಷೆ (GMAT) ಮತ್ತು ವ್ಯಾಸಂಗ ಪ್ರವೃತ್ತಿ ಪರೀಕ್ಷೆ(SAT) 90 ನಿಮಿಷ ಅವಧಿಯ 90 ಅಂಕಗಳ 90 ಬಹು ಆಯ್ಕೆ ಪ್ರಶ್ನೆಗಳನ್ನು ನೀಡಲಾಗಿತ್ತು. ಎರಡು ಪ್ರಶ್ನೆ...
ಹೆಚ್ಚಿನ ಸುದ್ದಿ

ಭಾರತೀಯ ಸೈನಿಕರ ಮೇಲೆ ಉಗ್ರರ ದಾಳಿ; ಓರ್ವ ಯೋಧ ಹುತಾತ್ಮ, ಮೂವರು ಯೋಧರಿಗೆ ಗಾಯ-ಕಹಳೆ ನ್ಯೂಸ್

ಶ್ರೀನಗರ, : ಜಮ್ಮು-ಕಾಶ್ಮೀರದ ಕುಲ್ಗಾಂನ ಖನಬಾಲ್‍ನ ಸಂಶೀಪುರದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಮೂವರು ಯೋಧರಿಗೆ ಗಾಯಗಳಾಗಿವೆ. ಎಂದಿನಂತೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಗಾಯಗೊಂಡಿದ್ದ ನಾಲ್ವರು ಯೋಧರ ಪೈಕಿ ಓರ್ವ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ ಎಂದು ಸೇನಾಮೂಲಗಳು ತಿಳಿಸಿದ್ದು,...
ಹೆಚ್ಚಿನ ಸುದ್ದಿ

ಅಂಬೇಡ್ಕರ್ ಜೀವನ ಚರಿತ್ರೆ ಒಂದಿದ್ದಾರೆ ಸಾಕು, ನಮ್ಮ ಸಂವಿಧಾನದ ಹಕ್ಕು ಮತ್ತು ಸಮಾಜದ ಕರ್ತವ್ಯದ ಬಗ್ಗೆ ಅರಿತುಕೊಳ್ಳಲು ಸಾಧ್ಯ; ಎಎಸ್‍ಐ ಯೊಗೀಶ್-ಕಹಳೆ ನ್ಯೂಸ್

ಕೊರಟಗೆರೆ: ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ಕರ್ನಾಟಕ ದಲಿತ ಸರ್ವೋದಯ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ, ಮಂಗಳವಾರ ಏರ್ಪಡಿಸಲಾಗಿದ್ದ 72ನೇ ಗಣರಾಜ್ಯೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಸಂವಿಧಾನ ಕಿರುವತ್ತಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಸಮಾರಂಭಕ್ಕಿಂತ ಮೊದಲು ಕರ್ನಾಟಕ ದಲಿತ ಸರ್ವೋದಯ ಸಮಿತಿ ಗ್ರಾಮಶಾಖೆಯಿಂದ ಜೆಟ್ಟಿ ಅಗ್ರಹಾರ ಶಾಖೆಯನ್ನು ಜಿಲ್ಲಾಧ್ಯಕ್ಷ ಬಿ. ಸಿ. ಹರೀಶ್ ಉದ್ಘಾಟಿಸಿದರು. ಕೊರಟಗೆರೆ ಎಎಸ್‍ಐ ಯೊಗೀಶ್ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂವಿಧಾನದ ಕಿರುವತ್ತಿಗೆ...
ಹೆಚ್ಚಿನ ಸುದ್ದಿ

ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಅರಿವು ಅವಶ್ಯಕವಾಗಿ ಇರಬೇಕು; ಈಶ್ವರ ನಾಯಕ್-ಕಹಳೆ ನ್ಯೂಸ್

ಬೆಟ್ಟಂಪಾಡಿ : ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಅರಿವು ಅವಶ್ಯಕವಾಗಿ ಇರಬೇಕು ಎಂದು ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆ ಕಾಟುಕುಕ್ಕೆಯ ರಾಜ್ಯಶಾಸ್ತ್ರ ಉಪನ್ಯಾಸಕರಾದ ಲೆಫ್ಟಿನೆಂಟ್ ಈಶ್ವರ ನಾಯಕ್ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ' ರಾಷ್ಟ್ರೀಯ ಮತದಾರರ ಸಾಕ್ಷರತಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿರು. ಮತದಾನದ ಹಕ್ಕು ಹೊಂದಿರುವ ಪ್ರಜೆಗಳು ಮತದಾನದ ಹಕ್ಕನ್ನು ಚಲಾಯಿಸುವುದರ ಜೊತೆಗೆ ಮತದಾನದ ಗೌಪ್ಯತೆಯನ್ನು ಕೂಡ ಕಾಪಾಡುವ...
ಹೆಚ್ಚಿನ ಸುದ್ದಿ

ಮುಸ್ಸಂಜೆಯ ಹೊಂಗಿರಣ’ ಪುಸ್ತಕ ಬಿಡುಗಡೆ | ರೂರಲ್ ಮಿರರ್ ಪ್ರಕಾಶನ, ಸ್ವಾವಲಂಬಿ ಆರ್ಥಿಕತೆಯೇ ಗಾಂಧಿ ಚಿಂತನೆಯ ಆರ್ಥಿಕತೆ ; ಅರವಿಂದ ಚೊಕ್ಕಾಡಿ-ಕಹಳೆ ನ್ಯೂಸ್

ಗುತ್ತಿಗಾರು : ಸಮಾಜದಲ್ಲಿ ಸಂಕಷ್ಟದ ಸಮಯ ಬಂದಾಗ ಗಾಂಧಿಯನ್ ಆರ್ಥಿಕತೆ ಸಮಾಜವನ್ನು ರಕ್ಷಣೆ ಮಾಡುತ್ತದೆ. ಇದಕ್ಕೆ ಉದಾಹರಣೆ ಕೊರೋನಾ. ಕೊರೋನಾದ ಸಂಕಷ್ಟದ ಸಮಯದಲ್ಲಿ ಈ ಗಾಂಧಿಯನ್ ಆರ್ಥಿಕತೆ ಸಮುದಾಯಗಳನ್ನು ರಕ್ಷಿಸಿಕೊಳ್ಳುತ್ತಾ ಸಾಗಿದೆ. ಗಾಂಧಿಯನ್ ಆರ್ಥಿಕತೆ ಎನ್ನುವುದು ಸ್ವಾವಲಂಬಿ ಆರ್ಥಿಕತೆ. ಇದುವೇ ಗಾಂಧಿ ಚಿಂತನೆಯ ಆರ್ಥಿಕತೆ ಎಂದು ಸಾಹಿತಿ, ಶಿಕ್ಷಕ ಅರವಿಂದ ಚೊಕ್ಕಾಡಿ ಹೇಳಿದರು. ಅವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮಂಗಳವಾರ...
ಹೆಚ್ಚಿನ ಸುದ್ದಿ

ಪ್ರಗತಿ ರೆಸಿಡೆನ್ಶಿಯಲ್ ಸ್ಟಡಿ ಸೆಂಟರ್ ನಲ್ಲಿ 72ನೇ ಪ್ರಜಾಪ್ರಭುತ್ವ ದಿನಾಚರಣೆ; ಜೀವನದಲ್ಲಿ ಒತ್ತಡ, ಟೀಕೆ, ಭ್ರಮೆಗಳಿಂದ ದೂರವಿರಿ- ವಿಠಲ ನಾಯಕ್ ಕಲ್ಲಡ್ಕ-ಕಹಳೆ ನ್ಯೂಸ್

ಪ್ರಗತಿ ವಿದ್ಯಾಸಂಸ್ಥೆಯು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯ ನೀಡುತ್ತಾ ಬಂದಿದೆ. ಅಂಕಗಳಿಂದ ಯಾವುದೇ ವಿದ್ಯಾರ್ಥಿಗಳನ್ನು ಅಳೆಯಬಾರದು. ಕೊರೋನವು ವಿದ್ಯಾರ್ಥಿಗಳಿಗೆ ಅಂಕ ಮುಖ್ಯವಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕೋವಿಡ್‍ನ ಸಂದರ್ಭದಲ್ಲಿ ಜೀವನದ ಶಾಶ್ವತ ಸಂಗಾತಿ ದೇಹ ಮತ್ತು ಮನಸ್ಸಾಗಿತ್ತು. ಅಂಕಗಳಿಗಿಂತ ಮುಖ್ಯವಾಗಿರುವುದು ಜೀವನದಲ್ಲಿ ಟೀಕೆಗಳನ್ನು ಬಾರದ ಹಾಗೆ ನೋಡಿಕೊಳ್ಳುವುದು ಎಂದು ಖ್ಯಾತ ಗೀತಾಸಾಹಿತ್ಯಗಾರ ವಿಠ¯ ನಾಯಕ್ ಕಲ್ಲಡ್ಕ ತಿಳಿಸಿದರು. ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ) ಪುತ್ತೂರು ಇದರ ಅಧೀನಕ್ಕೆ ಒಳಪಟ್ಟ ಕಬಕ ಪೋಳ್ಯದಲ್ಲಿ ಕಾರ್ಯಾಚರಿಸುತ್ತಿರುವ...
ಹೆಚ್ಚಿನ ಸುದ್ದಿ

ಮಂಗಳಪೇಟೆ ದಿವಂಗತ ರಾಘವ ಭಂಡಾರಿಯವರ ಮನೆಗೆ ಶಾಸಕ ಉಮನಾಥ್ ಕೋಟ್ಯಾನ್ ಭೇಟಿನೀಡಿ ಸಾಂತ್ವನ-ಕಹಳೆ ನ್ಯೂಸ್

ಮಂಗಳಪೇಟೆ: ಮಂಗಳಪೇಟೆ ರಾಘವ ಭಂಡಾರಿ ಇತ್ತೀಚೆಗೆ ನಿಧರಾಗಿದ್ದು ಇವರು ಆರ್.ಎಸ್.ಎಸ್ , ಬಿಜೆಪಿ,ವಿಶ್ವ ಹಿಂದೂ ಪರಿಷತ್‌ನ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ, ಅಯೋಧ್ಯಾ ಕರಸೇವಕರಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಕ್ರೀಯವಾಗಿ ಭಾಗವಸಿದಂತಹ ಇವರು ಬಾಳ ಮಂಡಳ ಪಂಚಾಯತ್ ಸದಸ್ಯಗಾಗಿದ್ದರು. ಇವರ ಮನೆಗೆ ಭೇಟಿ ನೀಡಿದ ಶಾಸಕ ಉಮನಾಥ್ ಕೋಟ್ಯಾನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.  ...
1 108 109 110 111 112 174
Page 110 of 174