Recent Posts

Saturday, April 25, 2026
ಹೆಚ್ಚಿನ ಸುದ್ದಿ

ಮೋದಿ ಬಜೆಟ್‍ನಲ್ಲಿ ಕಠಿಣ ಪರಿಸ್ಥತಿಯಲ್ಲಿ ಗಡಿಯಲ್ಲಿ ಚೀನಾದ ಆಕ್ರಮಣವನ್ನು ಎದುರಿಸುತ್ತಿರುವ ಜವಾನರಿಗೆ ಯಾವುದೇ ಬೆಂಬಲ ದೊರೆತಿಲ್ಲ – ರಾಹುಲ್ ಗಾಂಧಿ

ನವದೆಹಲಿ : 2021-22ನೇ ಹಣಕಾಸು ಸಾಲಿನ ಕೇಂದ್ರ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶ ಕಾಯುವ ಸೈನಿಕರಿಗೆ ಯಾವುದೇ ಬೆಂಬಲ ದೊರೆತಿಲ್ಲ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಅವರು ಪ್ರಧಾನಿ ಮೋದಿ ಅವರ 2021-22ನೇ ಹಣಕಾಸು ಸಾಲಿನ ಕೇಂದ್ರ ಬಜೆಟ್ ಎಂದರೆ, ಕಠಿಣ ಪರಿಸ್ಥತಿಯಲ್ಲಿ ಗಡಿಯಲ್ಲಿ ಚೀನಾದ ಆಕ್ರಮಣವನ್ನು ಎದುರಿಸುತ್ತಿರುವ ಜವಾನರಿಗೆ ಯಾವುದೇ ಬೆಂಬಲ ದೊರೆತಿಲ್ಲ. ಯೋಧರಿಗೆ ದ್ರೋಹ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ಯಮ ವಲಯದ ಕೆಲಸಗಾರರಿಗೂ ಮೋದಿ ಬಜೆಟ್‍ನಲ್ಲಿ ದ್ರೋಹ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದು. ಹೆಚ್ಚು ತೊಂದರೆಗೆ ಒಳಗಾಗಿರುವ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ಯಮ ವಲಯದ ಕೆಲಸಗಾರರಿಗೆ ಕಡಿಮೆ ಬಡ್ಡಿಯ ಸಾಲವನ್ನು ಕೂಡಾ ನೀಡಿಲ್ಲ. ಅಲ್ಲದೇ, ಜಿಎಸ್‍ಟಿ ನೆರವನ್ನು ನೀಡಿಲ್ಲ ಎಂದು ಹೇಳಿದರು.