Thursday, May 14, 2026
ಸುದ್ದಿ

ಕೊರೊನಾಗೆ ಹೆದರದ ಭಕ್ತರು, ಸುಬ್ರಹ್ಮಣ್ಯದಲ್ಲಿ ತುಂಬಿದ ಭಕ್ತಾದಿಗಳು – ಕಹಳೆ ನ್ಯೂಸ್

 

ಸುಬ್ರಹ್ಮಣ್ಯ : ಕೊರೊನಾ ಭೀüತಿ ರಾಜ್ಯದೆಲ್ಲೆಡೆ ಭಯ ಹುಟ್ಟಿಸಿದೆ. ಮುಂಜಾಗೃತ ಕ್ರಮವಾಗಿ ಮಾಲ್, ಥಿಯೇಟರ್‍ಗಳನ್ನು ರಾಜ್ಯ ಸರ್ಕಾರ ಬಂದ್ ಮಾಡಿದ್ದು ಪ್ರವಾಸಿಗರಿಗೂ ಪ್ರವಾಸ ಕೈಗೊಳ್ಳದಂತೆ ಸೂಚನೆ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾತ್ರ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಉರಿ ಬಿಸಿಲಿಗೂ ದೇವಸ್ಥಾನದ ರಥಬೀದಿ ಜನರಿಂದ ತುಂಬಿದ್ದು ರಾಜ್ಯದ ವಿವಿಧ ಭಾಗಗಳಿಂದ ಭಕ್ತರ ಸಮೂಹ ಇಲ್ಲಿಗೆ ಆಗಮಿಸಿದೆ.