
ಶಾಲಾ ಮಟ್ಟದ ವಿಜ್ಞಾನ ಹಬ್ಬದ ಆಚರಣೆ ಮತ್ತು ಶಾಲಾಭಿವೃದ್ಧಿಯ ಬಗ್ಗೆ ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳ ಜೊತೆ ಸಮಾಲೋಚನಾ ಸಭೆ ಬಂದಾರು ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮೈರೋಳ್ತಡ್ಕದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀಪತಿ ಭಟ್ ಕುರಾಯ ಉದ್ಘಾಟಿಸಿದರು. ಇನ್ನೂ ಈ ವೇಳೆ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಅಚಾರ್ಯ, ಎಸ್.ಡಿ.ಎಮ್.ಸಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ ಖಂಡಿಗ, ಗ್ರಾಮ ಪಂಚಾಯತ್ ಸದಸ್ಯರಾದ ಸುಂದರ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ರೂಪಾ ವಿಶ್ವಕರ್ಮ, ದರ್ಣಪ್ಪ ಗೌಡ ಗೌಡ ಅಂಡಿಲ, ಬಾಬಿ ಗೌಡ ಮಡ್ಯಲಕಂಡ ಹಾಗೂ ಪ್ರಾಥಮಿಕ ಶಾಲೆ ಮೈರೋಳ್ತಡ್ಕದ ಮುಖ್ಯೋಪಧ್ಯಾಯರಾದ ಚಂದ್ರಾವತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.









