Thursday, May 14, 2026
ಸುದ್ದಿ

ಮುತ್ತೋಟ್‌ ಫೈನಾನ್ಸ್‌ನಲ್ಲಿ 77 ಕೆಜಿ ಚಿನ್ನ ದರೋಡೆ; ಇಬ್ಬರ ಬಂಧನ – ಕಹಳೆ ನ್ಯೂಸ್

ಬೆಂಗಳೂರು, ಜನವರಿ 01 : ಬೆಂಗಳೂರಿನ ಮುತ್ತೋಟ್ ಫೈನಾನ್ಸ್‌ನಲ್ಲಿ ದರೋಡೆ ಮಾಡಿದ್ದ ಗುಂಪಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 8 ಕೆಜಿ ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆದಿದೆ.

ಚಿನ್ನ, ಬೆಳ್ಳಿಯಲ್ಲ, ಈರುಳ್ಳಿ ಕಳುವಾಗಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಕೇಸ್!

ಬೆಂಗಳೂರಿನ ಪುಲಿಕೇಶಿ ನಗರ ಪೊಲೀಸರ ವಿಶೇಷ ತಂಡ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದೆ. ಫ್ರೇಜರ್ ಟೌನ್‌ನಲ್ಲಿರುವ ಮುತ್ತೋಟ್ ಫೈನಾನ್ಸ್‌ನಲ್ಲಿ ಇಬ್ಬರೂ ಭದ್ರತಾ ಸಿಬ್ಬಂದಿಯಾಗಿದ್ದರು. ಡಿಸೆಂಬರ್ 24ರಂದು ದರೋಡೆ ಮಾಡಿ 77 ಕೆಜಿ ಚಿನ್ನ ದರೋಡೆ ಮಾಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು: 16 ಕೋಟಿ ಮೌಲ್ಯದ 70 ಕೆಜಿ ಚಿನ್ನ ಕದ್ದ ಐನಾತಿ ಕಳ್ಳರು

ಮುತ್ತೋಟ್ ಫೈನಾನ್ಸ್‌ ಶೌಚಾಲಯದ ಗೋಡೆ ಕೊರೆದು 77 ಕೆಜಿ ಚಿನ್ನ ದರೋಡೆ ಮಾಡಿ ಪಿಜಿಯಲ್ಲಿ ಇಡಲಾಗಿತ್ತು. ಇದರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ 8 ಕೆಜಿ ಚಿನ್ನವನ್ನು ಹಂಚಿಕೆ ಮಾಡಲಾಗಿತ್ತು. ನೇಪಾಳ-ಭಾರತ ಗಡಿ ಪ್ರದೇಶದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಗಿನ್ನಿಸ್ ದಾಖಲೆ ಸೇರಿದ ಚೀನಾದ ಚಿನ್ನ ಲೇಪಿತ ಶೌಚಾಲಯ

ನೇಪಾಳ ಮೂಲದವರು
12 ಜನರ ತಂಡದಿಂದ ದರೋಡೆ12 ಜನರ ತಂಡ ಫ್ರೇಜರ್ ಟೌನ್‌ನಲ್ಲಿರುವ ಮುತ್ತೋಟ್ ಫೈನಾನ್ಸ್‌ ದರೋಡೆ ಮಾಡಿದೆ. ಎಲ್ಲಾ ಆರೋಪಿಗಳು ನೇಪಾಳ ಮೂಲದವರು. ಮುತ್ತೋಟ್ ಫೈನಾನ್ಸ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ಇಬ್ಬರನ್ನು ಸೇರಿಸಿಕೊಂಡು ಈ ದರೋಡೆ ಮಾಡಲಾಗಿದೆ. ದರೋಡೆಗೆ ಸಹಕಾರ ನೀಡಿದ ಇಬ್ಬರಿಗೆ ತಲಾ 8 ಕೆಜಿ ಚಿನ್ನವನ್ನು ನೀಡಲಾಗಿದೆ.

ಡಿಸೆಂಬರ್ 23ರಂದು ಕಳ್ಳತನ
ಕದ್ದ ಚಿನವನ್ನು ಪಿಜಿಯಲ್ಲಿಟ್ಟರು

ಫ್ರೇಜರ್ ಟೌನ್‌ನಲ್ಲಿರುವ ಮುತ್ತೋಟ್ ಫೈನಾನ್ಸ್‌ನಲ್ಲಿ ಡಿಸೆಂಬರ್ 23ರ ರಾತ್ರಿ ಕಳ್ಳತನ ಮಾಡಲಾಗಿತ್ತು. ದರೋಡೆ ಮಾಡಿದ ಚಿನ್ನವನ್ನು ಪಿಜಿಗೆ ತೆಗೆದುಕೊಂಡು ಹೋಗಿ ಹಂಚಿಕೊಂಡರು. ಎಲ್ಲರೂ ಅಲ್ಲಿಂದ ಪರಾರಿಯಾಗಿ ದೆಹಲಿಯಲ್ಲಿ ಪುನಃ ಭೇಟಿಯಾಗುವ ಯೋಜನೆ ರೂಪಿಸಿ ಬೆಂಗಳೂರು ಬಿಟ್ಟು ಪರಾರಿಯಾದರು. ಈಗ ಇಬ್ಬರು ಆರೋಪಿಗಳಿಂದ 8 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.

77 ಕೆಜಿ ಚಿನ್ನ
ಚಿನ್ನ ಸಾಗಣೆ ಮಾಡಲು ಕಷ್ಟವಾಗಿತು

ಮುತ್ತೋಟ್ ಫೈನಾನ್ಸ್‌ನಿಂದ 77 ಕೆಜಿ ಚಿನ್ನವನ್ನು ದರೋಡೆ ಮಾಡಲಾಗಿತ್ತು. ಆದರೆ, ಚಿನ್ನವನ್ನು ಬೆಂಗಳೂರಿನಿಂದ ಹೊರಗೆ ಸಾಗಣೆ ಮಾಡುವುದು ಕಷ್ಟವಾಗಿದೆ. ಆದ್ದರಿಂದ, ಸ್ವಲ್ಪ ಚಿನ್ನವನ್ನು ಮಾತ್ರ ತೆಗೆದುಕೊಂಡು ಎಲ್ಲಾ ಆರೋಪಿಗಳು ಪರಾರಿಯಾಗಿದ್ದಾರೆ. ಇಬ್ಬರು ಆರೋಪಿಗಳು ಸಿಕ್ಕಿದ್ದು ಉಳಿದ 10 ಜನರಿಗಾಗಿ ಹುಡುಕಾಟ ನಡೆದಿದೆ.

ವಿಶೇಷ ತಂಡ ರಚನೆ
16 ಕೋಟಿ ಮೌಲ್ಯದ ಚಿನ್ನಾಭರಣ

ಫ್ರೇಜರ್ ಟೌನ್‌ನಲ್ಲಿರುವ ಮುತ್ತೋಟ್ ಫೈನಾನ್ಸ್‌ ದರೋಡೆಗೆ ಭದ್ರತಾ ವೈಫಲ್ಯವೇ ಕಾರಣವಾಗಿದೆ. 16 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.