Recent Posts

Thursday, August 13, 2026
ಸುದ್ದಿ

ಮುಳಿಯ ಪ್ರತಿಷ್ಠಾನದಿಂದ ‘ಧನಾತ್ಮಕ ಪೋಷಕತ್ವ’ ಆನ್‌ಲೈನ್ ಕಾರ್ಯಕ್ರಮ- ಕಹಳೆ ನ್ಯೂಸ್

ಮುಳಿಯ ಫೌಂಡೇಶನ್ ಹಾಗೂ ಮುಳಿಯ ಗೋಲ್ಡ್ & ಡೈಮಂಡ್ಸ್ ಸಹಯೋಗದಲ್ಲಿ ಬೆಂಗಳೂರಿನ 81ಕ್ಕೂ ಹೆಚ್ಚು ಶಾಲೆಗಳಲ್ಲಿ ಆಯೋಜಿಸಲಾಗುತ್ತಿರುವ ‘ಧನಾತ್ಮಕ ಪೋಷಕತ್ವ’ ವಿಚಾರಸಂಕಿರಣ ಸರಣಿಯ ಉದ್ಘಾಟನಾ ಕಾರ್ಯಕ್ರಮವು ಆನ್‌ಲೈನ್ ಮೂಲಕ ನಡೆಯಲಿದೆ.

ಜಾಹೀರಾತು

ಪೋಷಕರು ಮತ್ತು ಮಕ್ಕಳನ್ನು ತಲುಪುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ನಟ, ಚಿಂತಕ ಹಾಗೂ ಪ್ರೇರಣಾದಾಯಕ ಮಾತುಗಾರ ರಮೇಶ್ ಅರವಿಂದ್ ಅವರು ಭಾಗವಹಿಸಿ, ಮಕ್ಕಳ ಬೆಳವಣಿಗೆ, ಪೋಷಕರ ಜವಾಬ್ದಾರಿ ಹಾಗೂ ಮಕ್ಕಳೊಂದಿಗೆ ಸಕಾರಾತ್ಮಕ ಸಂಬಂಧ ಬೆಳೆಸುವ ಕುರಿತು ಉಪಯುಕ್ತ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ವಿವರ

📅 ದಿನಾಂಕ: ಗುರುವಾರ, 13 ಆಗಸ್ಟ್ 2026
⏰ ಲಾಗಿನ್ ಸಮಯ: ಸಂಜೆ 6:15
⏰ ಕಾರ್ಯಕ್ರಮದ ಸಮಯ: ಸಂಜೆ 6:30ರಿಂದ 7:30ರವರೆಗೆ
📍 ಮಾಧ್ಯಮ: Zoom – ಸಂಪೂರ್ಣ ಆನ್‌ಲೈನ್ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗಾಗಿ ಕೆಳಗಿನ Zoom ಲಿಂಕ್ ಬಳಸಬಹುದು:
https://us06web.zoom.us/meeting/register/9zA1g1FaT2mZ_JB1DzfCgg

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ತಮ್ಮ ಹೆಸರು ಹಾಗೂ ಇತರ ಅಗತ್ಯ ಮಾಹಿತಿಯೊಂದಿಗೆ 8123643916 ಸಂಖ್ಯೆಗೆ WhatsApp ಮೂಲಕ ಕಳುಹಿಸಬಹುದು.

ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಮುಳಿಯ ಜ್ಯುವೆಲ್ಸ್‌ನ ಅಧಿಕೃತ YouTube ಚಾನೆಲ್‌ನಲ್ಲಿಯೂ ಅವಕಾಶ ಕಲ್ಪಿಸಲಾಗಿದೆ:

YouTube:
https://www.youtube.com/@muliyajewels/streams

ಪೋಷಕರಲ್ಲಿ ಮಕ್ಕಳೊಂದಿಗೆ ಉತ್ತಮ ಸಂವಹನ, ಅರ್ಥಪೂರ್ಣ ಸಂಬಂಧ ಹಾಗೂ ಸಕಾರಾತ್ಮಕ ಪೋಷಕತ್ವದ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ವಿಚಾರಸಂಕಿರಣ ಸರಣಿಯನ್ನು ಆಯೋಜಿಸಲಾಗಿದೆ ಎಂದು ಕೇಶವ ಪ್ರಸಾದ್ ಮುಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ