
ಕಾಸರಗೋಡು : ವಿದ್ಯಾಶ್ರೀ ದಯಾನಂದನ್ ಕುಮಾರ್ ಉತ್ತಮ ಸ್ಯಾಕ್ಸೋಫೋನ್ ಕಲಾವಿದೆ. ಮಂಗಳೂರು ನಿವಾಸಿ. ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಇವೆಂಟ್ ಮ್ಯಾನೇಜೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಭವನ ಕಾಸರಗೋಡು ಇವರು ಕೊಡಮಾಡುವ ಪಯಸ್ವಿನಿ ಅಚೀವೆಂಟ್ ಅವಾರ್ಡ್ 2026 ಪ್ರಶಸ್ತಿಯನ್ನು ಭಾನುವಾರ ಸ್ವೀಕರಿಸಿದ್ದಾರೆ.
2010 ರಿಂದ ಸ್ಯಾಕ್ಸೋಫೋನ್ ವಾದನ ಮಾಡುತ್ತಾ ಬಂದಿದ್ದಾರೆ. ಹಲವು ಪ್ರದರ್ಶನಗಳನ್ನು ನಡೆಸಿದ್ದಾರೆ. ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪ್ರಶಸ್ತಿ, ಜ್ಞಾನ ಮಂದಾರ ಅಕಾಡೆಮಿಯಿಂದ ಅರಳುಮಲ್ಲಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ನೃತ್ಯ ಕೂಡ ಇವರ ಆಸಕ್ತಿಗಳಲ್ಲಿ ಸೇರಿದೆ.











