Recent Posts

Thursday, July 2, 2026
ಸುದ್ದಿ

ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನರ್ ಗ್ರಾಮದ ದ. ಕ. ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆ, ಏಮಾಜೆಯ ಮಕ್ಕಳ ಕನಸುಗಳಿಗೆ ₹ 50 ಸಾವಿರದ ಸಹಾಯಧನದ ಬೆಂಬಲ-ಕಹಳೆ ನ್ಯೂಸ್

ಮಾಣಿ  : ಶಿಕ್ಷಣದ ಮೇಲಿನ ಕಾಳಜಿ ಹಾಗೂ ಸಮಾಜಸೇವೆಯ ಮನೋಭಾವಕ್ಕೆ ಮತ್ತೊಂದು ಅರ್ಥಪೂರ್ಣ ನಿದರ್ಶನವಾಗಿ, ಇಡ್ಕಿದು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ರಮೇಶ್ ಪೂಜಾರಿ ಸೂರ್ಯ ಅವರು ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನರ್ ಗ್ರಾಮದ ದ. ಕ. ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆ, ಏಮಾಜೆಯ ಶಾಲಾಭಿವೃದ್ಧಿಗಾಗಿ ₹50,000 ದೇಣಿಗೆಯನ್ನು ನೀಡಿ ಮಾದರಿಯಾಗಿದ್ದಾರೆ.

ಜಾಹೀರಾತು

ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಹಾಗೂ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಈ ದೇಣಿಗೆಯನ್ನು ಬಳಸಿಕೊಳ್ಳಲಾಗುವುದು. ಸರ್ಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸಮಾಜದ ಸಹಭಾಗಿತ್ವ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಅವರ ಈ ಉದಾರ ಕೊಡುಗೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆಯ ಮುಖ್ಯ ಶಿಕ್ಷಕಿ ತ್ರಿವೇಣಿ ಅವರು ಶ್ರೀ ರಮೇಶ್ ಪೂಜಾರಿ ಸೂರ್ಯ ಅವರ ಸಮಾಜಮುಖಿ ಚಿಂತನೆ ಹಾಗೂ ದಾನಶೀಲತೆಯನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಗ್ರಾಮಸ್ಥರು ಅವರ ಈ ಉದಾತ್ತ ಸೇವಾಭಾವವನ್ನು ಅಭಿನಂದಿಸಿ, ಇಂತಹ ಸತ್ಕಾರ್ಯಗಳು ಸಮಾಜದ ಇತರರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

“ಶಾಲೆಗೆ ನೀಡಿದ ಪ್ರತಿಯೊಂದು ಕೊಡುಗೆಯೂ ಕೇವಲ ಹಣದ ದೇಣಿಗೆಯಲ್ಲ; ಅದು ಮಕ್ಕಳ ಕನಸುಗಳಿಗೆ ಬೆಳಕಾಗುವ ಆಶಾಕಿರಣ” ಎಂಬ ಅಭಿಪ್ರಾಯವು ಶಾಲಾ ವಲಯದಲ್ಲಿ ವ್ಯಕ್ತವಾಯಿತು ..