ಇಂದಿನಿಂದ ʻದುಬಾರಿ ದುನಿಯಾʼ; ಕರ್ನಾಟಕದಲ್ಲಿ ಯಾವುದೆಲ್ಲಾ ಏರಿಕೆ? – ಕಹಳೆ ನ್ಯೂಸ್

ಬೆಂಗಳೂರು: ಇಂದಿನಿಂದ ದೇಶದ ಆರ್ಥಿಕ ವರ್ಷ ಆರಂಭವಾಗಲಿದೆ. ಹಣಕಾಸು, ಬ್ಯಾಂಕಿಂಗ್, ಸಾರಿಗೆ, ತೆರಿಗೆ ಸೇರಿದಂತೆ ಹಲವು ದೈನಂದಿನ ಚಟುವಟಿಕೆಗಳು ಬದಲಾಗಲಿದೆ. ಇವು ಜನರ ಮೇಲೆ ನೇರ ಪರಿಣಾಮ ಬೀರಲಿವೆ. ನಗದು ವ್ಯವಹಾರ ಮತ್ತಷ್ಟು ದುಬಾರಿ ಆಗಲಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಹೊಸ ನಿಯಮಗಳು ಜಾರಿ ಆಗಲಿದೆ.
ಹಾಗಾದ್ರೆ ಆದಾಯ ತೆರಿಗೆ ಕಾಯ್ದೆಯಡಿ ಹೊಸ ನಿಯಮಗಳು ಏನು..? ಏನೆಲ್ಲ ಬದಲಾವಣೆಗಳು ಆಗುತ್ತೆ ಅನ್ನೋದನ್ನ ನೋಡುವುದಾದ್ರೆ…
> ಆಸ್ತಿ ಖರೀದಿ ವೇಳೆ 20 ಸಾವಿರಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ
> ಕೈಸಾಲ ಕೂಡ 20 ಸಾವಿರಕ್ಕಿಂತ ಜಾಸ್ತಿ ನಗದು ರೂಪದಲ್ಲಿ ತೆಗೆದುಕೊಳ್ಳಬಾರದು
> 20,000 ಕ್ಕಿಂತ ಜಾಸ್ತಿ ನಗದು ರೂಪದಲ್ಲಿ ಸೆಕ್ಯುರಿಟಿ ಡೆಪಾಸಿಟ್ ತೆಗೆದುಕೊಂಡ್ರೆ 100% ದಂಡ
> ಸೆಕ್ಯುರಿಟಿ ಡೆಪಾಸಿಟ್ 20 ಸಾವಿರಕ್ಕಿಂತ ಹೆಚ್ಚು ನಗದು ರೂಪದಲ್ಲಿ ವಾಪಸ್ ಕೊಟ್ರೆ 100 ದಂಡ
ನೀರು, ಕರೆಂಟ್, ಟೋಲ್ ಎಲ್ಲವೂ ದುಬಾರಿ
ಇಂದಿನಿಂದ ಎಲ್ಲ ದುಬಾರಿ.. ನಿಮ್ ಜೇಬಿಗೆ ಬೀಳುತ್ತೆ ಕತ್ತರಿ. ನೀರು, ಕರೆಂಟ್, ಟೋಲ್ ಸೇರಿ ಎಲ್ಲವೂ ದುಬಾರಿ ಆಗಲಿವೆ. ಕೇಂದ್ರ, ರಾಜ್ಯ ಸರ್ಕಾರಗಳೆರಡು ಜನಸಾಮಾನ್ಯರಿಗೆ ಬರೆ ಎಳೆದಿವೆ. ಇದು ಏಪ್ರಿಲ್ ಶಾಕ್. ನೀರಿನ ದರ, ವಿದ್ಯುತ್ ದರ ಏರಿಕೆ ರಾಜ್ಯ ಸರ್ಕಾರದ ಕೃಪೆಯಾದ್ರೆ, ಟೋಲ್ ದರ ಹೆಚ್ಚಳ ಕೇಂದ್ರ ಸರ್ಕಾರದ ಕೃಪೆ. ಟೋಲ್ ದರವೂ ಹೆಚ್ಚಳದ ಜೊತೆಗೆ ಪಾಸ್ ದರವೂ ಹೆಚ್ಚಳವಾಗಲಿದೆ.
ಟ್ರೇಡಿಂಗ್ ಶುಲ್ಕ, ಕೆಲ ಕಂಪನಿಗಳ ವಾಹನಗಳ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಆದ್ರೆ ಈ ಬೆಲೆ ಏರಿಕೆ ನಡುವೆ ರಸ್ತೆ ಅಪಘಾತ ವಿಮೆ ಟ್ಯಾಕ್ಸ್ನಿಂದ ವಿನಾಯ್ತಿದ್ದು, ಎಂಎಸ್ಎಂಐಗಳಿಗೆ 25 ಲಕ್ಷ ತನಕ ಯಾವುದೇ ಅಡಮಾನ ಇಲ್ಲದೆ ಸಾಲ ಪಡೆಯಬಹುದಾಗಿದೆ. ಹಾಗಾದ್ರೆ ಯಾವುದು ದುಬಾರಿ..? ಏಪ್ರಿಲ್ 1ರಿಂದ ಏನ್ ಹೆಚ್ಚಾಗುತ್ತೆ.? ಅನ್ನೋದನ್ನ ನೋಡುವುದಾದ್ರೆ…
* ಏಪ್ರಿಲ್ ಶಾಕ್: ದುಬಾರಿ ದುನಿಯಾ..!
> ಬೆಂಗಳೂರಲ್ಲಿ ನೀರಿನ ದರ 3% ಏರಿಕೆ ಫಿಕ್ಸ್
> ಕಸ ವಿಂಗಡಣೆ ಮಾಡದಿದ್ದರೆ ದಂಡ
> ಕೈಗಾರಿಕೆಗಳಿಗೆ ವಿದ್ಯುತ್ ದರ ಏರಿಕೆ
> ಉಪಚುನಾವಣೆ ಬಳಿಕ ಗೃಹ ಬಳಕೆ ವಿದ್ಯುತ್ ದರ ಏರಿಕೆ
> ರಾಜ್ಯದ ಟೋಲ್ಗಳಲ್ಲಿ ನಗದು ಪಾವತಿ ಸ್ಥಗಿತ
> ಟೋಲ್ಗಳಲ್ಲಿ ಯುಪಿಐ, ಕಾರ್ಡ್ ಮಾತ್ರ ಬಳಕೆ
> ರಾಜ್ಯದ ಟೋಲ್ಗಳಲ್ಲಿ 3% ರಿಂದ 5%ರಷ್ಟು ದರ ಏರಿಕೆ
> ಕಾರ್ಗಳಿಗೆ 5 ರಿಂದ 10 ರೂಪಾಯಿ ಟೋಲ್ ಹೆಚ್ಚಳ ಆಗಲಿದೆ
> ವಾಣಿಜ್ಯ ವಾಹನಗಳಿಗೆ 15 ರಿಂದ 40 ರೂಪಾಯಿ ಟೋಲ್ ಹೆಚ್ಚಳ
> ವಾರ್ಷಿಕ ಫಾಸ್ಟ್ಟ್ಯಾಗ್ ಪಾಸ್ ದರ 3,075 ರೂಪಾಯಿಗೆ ಏರಿಕೆ
> ಕೆಲ ಕಂಪನಿಗಳ ಕಾರ್ಗಳ ಬೆಲೆಯಲ್ಲಿ ಏರಿಕೆ ಆಗಲಿದೆ.









