Recent Posts

Sunday, April 26, 2026
ರಾಜಕೀಯಸುದ್ದಿ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಬೆಂಬಲ ಸೂಚಿಸಿದ ವ್ಯಕ್ತಿ ಮೇಲೆ ಹಲ್ಲೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ನವೆಂಬರ್​ 19ರಂದು ಎರ್ನಾಕುಲಂ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಹಿಳೆಯರೊಂದಿಗೆ ಸಂಗೀತ್​ ಕೂಡ ಭಾಗವಹಿಸಿದ್ದರು. ನವೆಂಬರ್​ 27ಕ್ಕೆ ಅವರು ಮಲಪ್ಪುರಂನ ತಮ್ಮ ಮನೆಗೆ ವಾಪಾಸಾಗಿದ್ದು, ಆ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡು ಬಂದ ಹಲ್ಲೆ ನಡೆಸಲಾಗಿದೆ.
ಅಂದು ಮಧ್ಯರಾತ್ರಿ ನನ್ನ ಸ್ನೇಹಿತರೊಂದಿಗೆ ಮನೆಗೆ ಬರುತ್ತಿದ್ದಾಗ ರಸ್ತೆಯಲ್ಲಿ ಅಡ್ಡಹಾಕಿದ ಎಬಿವಿಪಿಯ ಕೆಲವರು ನನ್ನ ಹೆಸರು ಸಂಗೀತ್​ ಹೌದೋ ಅಲ್ಲವೋ ಎಂದು ಕೇಳಿದರು. ನಾನು ನನ್ನ ಹೆಸರು ಹೇಳುತ್ತಿದ್ದಂತೆ ಬೇರೇನೂ ಹೇಳದೆ ಹೊಡೆಯಲಾರಂಭಿಸಿದರು. ಆ ಗುಂಪಿನಲ್ಲಿದ್ದ ಕೆಲವರನ್ನು ನಾನು ಎಬಿವಿಪಿ ಸಂಘಟನೆಯಲ್ಲಿ ನೋಡಿದ್ದರಿಂದ ಅವರ ಮೇಲೆ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸಂಗೀತ್​ ಹೇಳಿದ್ದಾರೆ.
ಸಂಗೀತ್​ ಅವರ ತಲೆಗೆ ಗಾಯಗಳಾಗಿದ್ದು, ಅಲ್ಲಿನ ಸ್ಥಳೀಯರು ಕಿಡಿಗೇಡಿಕಗಳನ್ನು ಓಡಿಸಿದ್ದರಿಂದ ಹೆಚ್ಚಿನ ಅಪಾಯವೇನೂ ಸಂಭವಿಸಿಲ್ಲ. ಅವರನ್ನು ನೀಲಂಬೂರ್​ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಸಂಗೀತ್​ ಅವರ ಸ್ನೇಹಿತರ ಮನೆಯಲ್ಲಿ ವಾಸವಾಗಿದ್ದಾರೆ. ಕಿಡಿಗೇಡಿಗಳು ಮತ್ತೆ ಹಲ್ಲೆ ನಡೆಸುವ ಸಾಧ್ಯತೆ ಇರುವುದರಿಂದ ಆಫೀಸಿಗೆ ಹೋಗುತ್ತಿಲ್ಲ.