
ಪುತ್ತೂರು: ಪುತ್ತೂರು ಅಂದ್ರೆ ಅದು ಸಾಹಿತ್ಯ ಪ್ರೇಮಿಗಳ ಊರು. ಇಲ್ಲಿ ವರ್ಷಕ್ಕೆ ಕವನ ಸಂಕಲನಗಳು ಬಿಡುಗಡೆ ಆಗೋದು ಸರ್ವೇ ಸಾಮಾನ್ಯವಾಗಿದ್ದು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಹತ್ತಿರದ ಕಾಡು ಬಯಲು ರಂಗ ಮಂದಿರ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ.
ಮಾಸ್ಟರ್ ಪ್ಲಾನರಿಯ ಎಸ್ಕೆ ಆನಂದ್ರ ಭಾವ ಲೋಕ ಅನ್ನೋ ಕವನ ಸಂಕಲನ ಮತ್ತು ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕೃತಿಯನ್ನು ಖ್ಯತ ಕವಿಯಾದ ಸುಬ್ರಾಯ ಚೊಕ್ಕಡಿ ಬಿಡುಗಡೆ ಗೊಳಿಸಿದ್ರು. ನಂತರ ಮಾತನಾಡಿದ ಅವ್ರು ಭಾವ ಲೋಕ ಕೃತಿಯ ಬಗ್ಗೆ ಮತ್ತು ಕೃತಿಕಾರರ ಬಗ್ಗೆ ಹೇಳಿದರು.
ಈ ವೇಳೆ ಉಪವಿಭಾಗದ ಸಹಾಯಕ ಆಯುಕ್ತ ಎಚ್ ಕೆ ಕೃಷ್ಣ ಮೂರ್ತಿ, ಕ್ಫಿ. ಶಿವಾನಂದ, ಮತ್ತಿತ್ತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಪುತ್ತೂರು ಪಾಂಡುರಂಗ ನಾಯಕ್ ಅವರಿಂದ ಸಂಗೀತ ಲಹರಿ ಕಾರ್ಯಕ್ರಮ ನಡೆಯಿತು.









