Recent Posts

Saturday, September 12, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಣಿಪಾಲ:ಹೆದ್ದಾರಿಯಿಂದ ಜಿಗಿದು ಪಲ್ಟಿ ಹೊಡೆದ ಕಾರು- ಕಹಳೆ ನ್ಯೂಸ್

ಮಣಿಪಾಲ: ಈಶ್ವರ ನಗರ ನೀರಿನ ಟ್ಯಾಂಕ್ ಬಳಿ ಕಾರು ಅಪಘಾತವಾದ ಘಟನೆ ಮಾ.8ರ ಶನಿವಾರ ತಡರಾತ್ರಿ ಸುಮಾರು 1.30 ಗಂಟೆಗೆ ಸಂಭವಿಸಿದೆ.

ಜಾಹೀರಾತು

ಕಾರು ಹೆದ್ದಾರಿಯಿಂದ ಜಿಗಿದು ಪಲ್ಟಿ ಹೊಡೆದಿದ್ದು, ಈ ಕಾರಿನಲ್ಲಿ ಹಲವು ನಂಬರ್ ಪ್ಲೇಟ್ ಗಳಿದ್ದವು. ಅಪಘಾತವಾದ ತತ್ ಕ್ಷಣ ಕಾರಿನೊಳಗಿದ್ದ ವ್ಯಕ್ತಿಗಳು ವಿವಿಧ ನೊಂದಣಿ ಸಂಖ್ಯೆಗಳುಳ್ಳ ನಂಬರ್ ಪ್ಲೇಟ್ ಗಳನ್ನು ಪೊದೆಗೆ ಎಸೆದು ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ಪರಿಣಾಮ ಓರ್ವ ವ್ಯಕ್ತಿಗೆ ಮಾತ್ರ ಗಾಯವಾಗಿದ್ದು, ಜೊತೆಗಿದ್ದವರು ಆತನನ್ನು ಉಪಚರಿಸುವ ಗೋಜಿಗೆ ಹೋಗಿಲ್ಲ. ಬದಲಾಗಿ ಕಾರಿನೊಳಗಿದ್ದ ವಸ್ತುಗಳನ್ನು (ಸಂಶಯಾಸ್ಪದ) ತೆಗೆದುಕೊಂಡು ಹೋಗುವ ಧಾವಂತದಲ್ಲಿದ್ದರು.

ಗಾಯಗೊಂಡ ವ್ಯಕ್ತಿಯನ್ನು ಅಲ್ಲಿ ಸೇರಿದ ಸಾರ್ವಜನಿಕರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.