Saturday, September 12, 2026
ರಾಜಕೀಯಸುದ್ದಿ

ಇತಿಹಾಸ ತಿರುಚುವವರು ಅಧಿಕಾರಕ್ಕೇರಿರುವುದು ದೇಶಕ್ಕೆ ದುರಂತ; ವೀರಪ್ಪ ಮೊಯ್ಲಿ – ಕಹಳೆ ನ್ಯೂಸ್

ಮಂಗಳೂರು: ಇತಿಹಾಸ ತಿರುಚುವವರು, ಸ್ವತಂತ್ರ ಸಂಸ್ಥೆಗಳನ್ನು ವಿರೋಧಿಸುವವರು ಅಧಿಕಾರಕ್ಕೇರಿರುವುದು ದೇಶಕ್ಕೆ ದುರಂತ ಎಂದು ಮಾಜಿ ಸಿಎಂ, ಸಂಸದ ಡಾ.ಎಂ.ವೀರಪ್ಪಮೊಯ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಜಾಹೀರಾತು

ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ನೆಹರುರವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡದರು. ನೆಹರೂರವರ ಪಂಚವಾರ್ಷಿಕ ಯೋಜನೆಗಳು, ಅಲಿಪ್ತ ನೀತಿ, ಸ್ವತಂತ್ರ ಸಂಸ್ಥೆಗಳ ಸ್ಥಾಪನೆ, ಜಾತ್ಯತೀತ ಸಂಸ್ಕೃತಿಯ ಪ್ರತಿಪಾದನೆ, ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳಂತಹ ಕೊಡುಗೆಗಳು ಭಾರತದ ಸಂಪತ್ತುಗಳಾಗಿವೆ. ನೆಹರೂರವರ ಆದರ್ಶಗಳನ್ನು ಪಾಲಿಸುವ ಮೂಲಕ ದೇಶದ ಸಂಸ್ಕೃತಿ, ಸಮೃದ್ಧಿಯನ್ನು ಉಳಿಸುವಂತಹ ಕಾರ್ಯ ನಡೆಯಬೇಕಾಗಿದೆ ಎಂದು ಮೊಯ್ಲಿ ಹೇಳಿದರು. ಈ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ಸಭಾಧ್ಯಕ್ಷತೆ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು