Recent Posts

Saturday, September 12, 2026
ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಮಾತೃಶಕ್ತಿ ದುರ್ಗಾವಾಹಿನಿ ಪೂಜಾ ಸಮಿತಿವತಿಯಿಂದ ಇಂದು ಸಂಜೆ 5.00ಕ್ಕೆ ಪುತ್ತೂರಿನಲ್ಲಿ ದುರ್ಗಾಪೂಜೆ – ಕಹಳೆ ನ್ಯೂಸ್

ಪುತ್ತೂರು : ಹಿಂದೂ ಮೂಲ ಮಾನ ಬಿಂದುಗಳ ರಕ್ಷಣೆ ಯಲ್ಲಿ,ಧಾರ್ಮಿಕ ಕ್ಷೇತ್ರದಲ್ಲಿ,ಗೋಮಾತೆ,ಹಿಂದೂ ಹೆಣ್ಣು ಮಕ್ಕಳ ರಕ್ಷಣೆ,ಮತಾಂತರದ ವಿರುದ್ಧ ವಿಶ್ವದ ಹಿಂದೂ ಗಳ ಏಳಿಗೆ ಗಾಗಿ ಜನರ ನಡುವೆ ಕಾರ್ಯಚರಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಇದರ ಕಾರ್ಯ ವಿಭಾಗ ಗಳಾದ ಬಜರಂಗದಳ ಮಾತೃಶಕ್ತಿ ದುರ್ಗಾ ವಾಹಿನಿ ಇದರ ವತಿಯಿಂದ ದಿನಾಂಕ 30 – 10 – 2018 ರ ಮಂಗಳವಾರ ಇಂದು ಸಂಜೆ 5 ಗಂಟೆಗೆ ಸರಿಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ದ ನಟರಾಜ ವೇದಿಕೆಯಲ್ಲಿ ಭವ ಸಾಗರ ತಾರಿಣಿಯಾದ ಜಗನ್ಮಾತೆ ದುರ್ಗೆಯ ಆರಾಧನೆಯಿಂದ ಐಹಿಕ ಹಾಗೂ ಆಮುಷ್ಠಿಕ ಅಭೀಷ್ಟಗಳನ್ನು ಪಡೆಯಲುಸಾಮೂಹಿಕ ದುರ್ಗಾ ಪೂಜೆ ನಡೆಯಲಿದೆ.

ಜಾಹೀರಾತು

ವೇ.ಮೂ. ಕಶೇಕೋಡಿ ಸೂರ್ಯನಾರಾಯಣ ಭಟ್ ರವರ ನೇತೃತ್ವದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸನಾತನ ಧರ್ಮನುಯಾಯಿ ಬಂಧುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ,ಮಾತೃಶಕ್ತಿ, ದುರ್ಗಾವಾಹಿನಿ ಪೂಜಾ ಸಮಿತಿ ಪುತ್ತೂರು ವಿನಂತಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು