Saturday, September 12, 2026
ಸುದ್ದಿ

ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ: ಎರಡು ಪಕ್ಷಗಳಿಗೆ ಪ್ರತಿಷ್ಟೆಯ ಪ್ರಶ್ನೆ – ಕಹಳೆ ನ್ಯೂಸ್

ಉಪಚುನಾವಣೆ
ಮಂಗಳೂರು: ಬಂಟ್ವಾಳ ತಾಲೂಕಿನ ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ ಜಿಲ್ಲೆಯ ರಾಜಕೀಯ ಧುರೀಣರ ಕಣ್ಣು ಇತ್ತ ಹಾಯಿಸುವಂತೆ ಮಾಡಿದೆ.

ಜಾಹೀರಾತು

ಕಾಂಗ್ರೇಸ್ ಪಕ್ಷದಡಿಯಲ್ಲಿ ಸ್ಪರ್ಧೆ ಮಾಡಿ ಬಳಿಕ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದ ಪ್ರಭಾಕರ ಪ್ರಭು ಅವರ ತೆರವಾದ ಸ್ಥಾನಕ್ಕೆ ಈ ಚುನಾವಣೆ .ಆ.28 ರಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೇಸ್‌ನಿಂದ ಬಿಲ್ಲವ ಸಮುದಾಯದ ದಿನೇಶ್ ಸುಂದರ್ ಶಾಂತಿಯವರನ್ನು ಪ್ರಭು ಅವರಿಗೆ ಎದುರಾಳಿ ಅಭ್ಯರ್ಥಿಯಾಗಿ ಕಾಂಗ್ರೇಸ್ ಕಣಕ್ಕಿಳಿಸಿದೆ. 15ರಂದು ನಾಮಪತ್ರ ಸಲ್ಲಿಕೆಯಾಗಲಿದ್ದು ಎರಡು ಪಕ್ಷಗಳ ಪ್ರಮುಖರಿಗೆ ಈ ಚುನಾವಣೆ ಬಾರೀ ಪ್ರತಿಷ್ಟೆಯ ಪ್ರಶ್ನೆಯಾಗಿದ್ದು, ಅಭ್ಯರ್ಥಿಗಳಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಯಾವುದಕ್ಕೂ ಫಲಿತಾಂಶ ಬರುವವರೆಗೂ ಕಾಯಬೇಕಾಗಿದೆ.